ದೇವಾಪುರ ಬಿಲ್ವಿದ್ಯೆ ಪಟುಗಳಿಗೆ ಚಿನ್ನದ ಪದಕ

0
17

ಸುರಪುರ :ತಾಲೂಕಿನ ದೇವಪುರ ಗ್ರಾಮದ ಬಿಲ್ವಿದ್ಯೆ ಕ್ರೀಡಾಪಟುಗಳು ಇತ್ತೀಚಿಗೆ ಮೈಸೂರಿನಲ್ಲಿ ನಡೆದ ಮೈಸೂರು ದಸರಾ ರಾಜ್ಯಮಟ್ಟದ ಬಿಲ್ವಿದ್ಯೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಹಾಗೂ ಚಿನ್ನದ ಪದಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

ದೇವಪುರ ಗ್ರಾಮದ ಏಕಲವ್ಯ ಬಿಲ್ವಿದ್ಯೆ ಕ್ರೀಡಾಪಟುಗಳಾದ, ಭೀಮರಾಯ ರಘು ಮೌನೇಶ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ, ಇನ್ನು ಮಹಿಳೆಯರ ವಿಭಾಗದಲ್ಲಿ ನಾಗಮ್ಮ ರೇಣುಕಾ ಬಸಮ್ಮ ಪ್ರಥಮ ಸ್ಥಾನ ಪಡೆದು ದೇವಪುರ ಗ್ರಾಮಕ್ಕೆ ಕೀರ್ತಿಯನ್ನು ತಂದಿದ್ದಾರೆ.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ಕಲಬುರ್ಗಿ ವಿಭಾಗದಿಂದ ಸುರಪುರ ತಾಲೂಕಿನ ದೇವಪುರ ಗ್ರಾಮದ ಬಿಲ್ವಿದ್ಯೆ ಕ್ರೀಡಾಪಟುಗಳು ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದಕ್ಕೆ ಗ್ರಾಮಸ್ಥರು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಕ್ರೀಡಾಪಟುಗಳು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಅರಸಿ ಹಾರೈಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here