ಸುರಪುರ: ರಾಜ್ಯ ಸರಕಾರ ಸರ್ವ ಪಕ್ಷಗಳ ಸಭೆ ನಡೆಸಿ ರಾಜ್ಯದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲು ಪ್ರಮಾಣ ಹೆಚ್ಚಿಸುವ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಬಿಜೆಪಿ ಪಕ್ಷದಿಂದ ಸಂಭ್ರಮಾಚರಿಸಲಾಗಿದೆ.
ನಗರದ ಮಹಾತ್ಮ ಗಾಂಧಿ ವೃತ್ತ ಹಾಗೂ ಡಾ:ಬಿ.ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಅನೇಕ ಮುಖಂಡರು,ಶ್ರಿಮಹರ್ಷಿ ವಾಲ್ಮೀಕಿ ಹಾಗೂ ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ಶ್ರೀ ಮಹರ್ಷಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿಯವರು ಕಳೆದ 8 ತಿಂಗಳಿಂದ ನಿರಂತರ ಹಗಲಿರಳು ಹೋರಾಟ ನಡೆಸಿದರು.ಅಲ್ಲದೆ ಈ ಮುಂಚೆಯೇ ನಮ್ಮ ನಾಯಕರಾದ ಶಾಸಕ ನರಸಿಂಹ ನಾಯಕ (ರಾಜುಗೌಡ) ಅವರು ನಿರಂತರ ಶ್ರಮವಹಿಸಿದ್ದರಿಂದ ಇಂದು ಸರಕಾರ ಎಸ್.ಸಿ ಮತ್ತು ಎಸ್.ಟಿ ಸಮುದಾಯದ ಮೀಸಲು ಹೆಚ್ಚಿಸುವುದಾಗಿ ಹೇಳಿಕೆ ನೀಡಲು ಕಾರಣವಾಗಿದೆ.ಆದ್ದರಿಂದ ಮೀಸಲು ಹೆಚ್ಚಳಕ್ಕೆ ಕ್ರಮ ಕೈಗೊಳ್ಳುತ್ತಿರುವ ರಾಜ್ಯ ಸರಕಾರ ಮತ್ತು ಇದಕ್ಕೆ ಸಹಕಾರ ನೀಡಿರುವ ಕೇಂದ್ರ ಸರಕಾರಕ್ಕೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಂಕರ ನಾಯಕ,ಬ¯ಭೀಮ ನಾಯಕ ಬೈರಿಮಡ್ಡಿ,ವಿಷ್ಣು ಗುತ್ತೇದಾರ,ಶರಣು ನಾಯಕ ಬೈರಿಮಡ್ಡಿ,ಶರಣು ನಾಯಕ ಡೊಣ್ಣಿಗೇರಾ,ವೆಂಕಟೇಶ ನಾಯಕ ಬೈರಿಮಡ್ಡಿ,ದೇವರಾಜ ನಾಯಕ,ಈಶ್ವರ ನಾಯಕ,ಶ್ರೀನಿವಾಸ ನಾಯಕ ಸೇರಿದಂತೆ ಅನೇಕರು ಭಾಗವಹಿಸಿದ್ದರು.