ಹೊನ್ನ ಕಿರಣಗಿಯಲ್ಲಿ ನವಲಗುಂದ ನಾಗಲಿಂಗನ ಪುರಾಣ ಪ್ರಾರಂಭ

0
67

ಫರತಾಬಾದ: ಕಲಬುರಗಿ ತಾಲೂಕಿನ ಹೊನ್ನ ಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ಲಿಂಗೈಕ್ಯ ಶ್ರೀ ಕರಿಬಸವೇಶ್ವರ ಶಿವಾಚಾರ್ಯರ ಏಳನೇ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ನವಲಗುಂದ ನಾಗಲಿಂಗ ಶಿವಯೋಗಿಗಳ ಪುರಾಣ ಪ್ರಾರಂಭವಾಯಿತು.

ಇಂದಿನಿಂದ 11ದಿನಗಳ ಕಾಲ ಜನವರಿ 26ರವರೆಗೆ ಜರುಗಲಿದೆ. 26ರಂದು ಸಾಯಂಕಾಲ 6ಗಂಟೆಗೆ ರಥೋತ್ಸವ ಜರುಗಲಿದೆ. ಪುರಾಣ ಪ್ರಾರಂಭವನ್ನು ತೊನಸನಹಳ್ಳಿ ಶ್ರೀಗಳಾದ ಶ್ರೀ.ಷ.ಬ್ರ.ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ನೇತೃತ್ವವನ್ನು ರಾಚೋಟೇಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ.ಷ.ಬ್ರ.ಚಂದ್ರಗುಂಡ ಶಿವಾಚಾರ್ಯರು ವಹಿಸಿ ಸಮಾಜದಲ್ಲಿ ಶಿಕ್ಷಣ ಮತ್ತು ಸಂಸ್ಕಾರ ಕೊಡುವಂತಹ ಕೇಂದ್ರಗಳು ಮಠಗಳು ಆಗಿರುತ್ತವೆ, ಶರಣರ ಮಹತ್ವವನ್ನು ತಿಳಿದುಕೊಳ್ಳಬೇಕು ಅವರು ಹಾಕಿಕೊಟ್ಟ ದಾರಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

Contact Your\'s Advertisement; 9902492681

ವೇದಿಕೆ ಮೇಲೆ ಕನ್ನಡ ಸಾಹಿತ್ಯ ಪರಿಷತ್ ಕಲಬುರಗಿ ತಾಲೂಕು ಅಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ ಮಾತನಾಡಿ ನಮ್ಮ ಮಠವು ಗ್ರಾಮದ ಜನರ ಏಳಿಗೆಗಾಗಿ ಕಾರ್ಯಕ್ರಮಗಳು ಹಮ್ಮಿಕೊಳ್ಳುತ್ತಿದ್ದಾರೆ. ಜನರಿಗೆ ಸಂಸ್ಕಾರದ ಜೊತೆಗೆ ಶಿಕ್ಷಣವೂ ನೀಡುತ್ತಿದ್ದಾರೆ ಎಂದು ಹೇಳಿದರು.

ವಿಶ್ವನಾಥ ವಾರಕರ, ಶಾಂತಯ್ಯ ಡೆಂಗಿಮಠ, ಜಗನ್ಣ ಆಲಮೇಲಕರ್ ಇದ್ದರು. ಪ್ರವಚನಕಾರರಾದ ಪಂಡಿತ ರತ್ನ ಸಿದ್ದರಾಮ ಸ್ವಾಮಿಗಳು, ವಿಶ್ವರಾಧ್ಯ ಗೃಹಸ್ಥಾಶ್ರಮ ಬ್ಯಾಡಗಿಹಾಳ ಅವರು ನೇರವೇರಿಸಿಕೊಟ್ಟ್ರು. ಸಂಗೀತ ಸೇವೆಯನ್ನು ಭೀಮನಗೌಡ ಯರಗಲ, ತಬಲ ವಾದಕರಾದ ವೀರೇಶ್ ಕಟ್ಟಿ ಸಂಗಾವಿ, ಕಾರ್ಯಕ್ರಮದಲ್ಲಿ ಅಖಂಡಪ್ಪ ಸಿರವಾಳ, ಶಿವಕುಮಾರ ತುಪ್ಪದ, ಕಲ್ಯಾಣಕುಮಾರ ನಂದಿಕೋಲ, ಮಲ್ಲಕಾರ್ಜುನ ಸಜ್ಜನ, ಮುರುಗೇಂದ್ರ ಸಿರನೂರ, ರಾಮು ಹೂಗಾರ್, ಶರಣು ಮುಸಾವಳಗಿ, ಪ್ರಕಾಶ್ ಮುಡ್ಡಿ, ಬಸವರಾಜ್ ಬಸ್ತಾಳ, ತೊನಸನಹಳ್ಳಿ ಭಕ್ತರು, ಹೊನಗುಂಟಿ ಭಕ್ತರು ಇನ್ನು ಇತರರು ಇದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮಠದ ಭಕ್ತರಾದ ಬಸವರಾಜ ಚಟ್ಟಿ ಅವರು ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here