ಆಳಂದ : ಎನ್.ಎಚ್.ಎಂ. ಅಡಿಯಲ್ಲಿ ಬರುವ ಒಳಗುತ್ತಿಗೆ ನೌಕರರ ಸಂಘ ಕರೆ ನೀಡಿರುವ ಅನಿರ್ದಿಷ್ಟವಾಗಿ ಧರಣಿ ಸತ್ಯಾಗ್ರಹಕ್ಕೆ ಆಳಂದ ಸಾರ್ವಜನಿಕ ಆಸ್ಪತ್ರೆಯ ನೌಕರರು ಸೊಮವಾರ ಬೆಂಬಲ ಸೂಚಿಸಿದ್ದಾರೆ.
ಈ ಕುರಿತು ಮಾತನಾಡಿದ ನೌಕರರು ಇದರಿಂದ ರೋಗಿಗಳ ಸೇವೆಯಲ್ಲಿ ಅಡಚಣೆಯಾಗಿದೆ. ಕೂಡಲೇ ಸಮಸ್ಯೆ ಬಗೆಹರಿಸಿ,ಖಾಯಂ ನೌಕರಿಯನ್ನಾಗಿ ಮಾಡಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ಎಂದು ಅವರು ಒತ್ತಾಯಿಸಿದರು. ಸಾರ್ವಜನಿಕ ಆಸ್ಪತ್ರೆಯ ಸಹಾಯಕ ಅಡಳಿತ ಅಧಿಕಾರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಪಲ್ಲವಿ,ಕಾವೇರಿ,ಅಮರೀಶ್,ಎಮ್.ಡಿ.ಅಜರ್ ಅಲಿ,ಬಾಬು,ದೇವಾನಂದ,ಡಾ.ಸೈದಾ ಫಾತೀಮಾ ಮತ್ತಿತರರು ಇದ್ದರು.
ಸ್ಪಷ್ಟನೆ: ಮುಷ್ಕರದಲ್ಲಿ 19 ವೈದ್ಯರು ತೆರಳಿದ್ದಾರೆ. ರೋಗಿಗಳಿಗೆ ಯಾವುದೇ ಅಡಚಣೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ವೈಧ್ಯಾಧೀಕಾರಿ ಮಾಂತಪ್ಪ ಹಾಳಮಳ್ಳಿ ಅವರು ತಿಳಿಸಿದ್ದಾರೆ.