ಶಹಾಬಾದ : ದಲಿತ ಸಂಘಟನೆಗಳ ಐಕ್ಯತಾ ಹೋರಾಟ ಸಮಿತಿ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ರೇವುನಾಯಕ ಬೆಳಮಗಿ ಹಾಗೂ ಪ್ರಿಯಾಂಕ್ ಖರ್ಗೆ ಅವರನ್ನು ಬೆಂಬಲಿಸಲು ತೀರ್ಮಾನಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಎಪ್ರಿಲ್ 30ರಂದು ಬೆಳಗ್ಗೆ 10 ಗಂಟೆಗೆ ಕೆಇಬಿ ರಸ್ತೆಯ ಶಮ್ಸ ಫಂಕ್ಷನ್ ಹಾಲ್ನಲ್ಲಿ ಬೃಹತ್ ಸಭೆಯನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ನಗರ ಸಭೆಯ ಮಾಜಿ ಸದಸ್ಯ ರಾಜಕುಮಾರ ಸಿಂಗೆ ಹೇಳಿದರು.
ಅವರು ಕನ್ನಡ ಭವನದಲ್ಲಿ ಆಯೋಜಿಸಲಾದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಈ ಸಭೆಗೆ ರಾಜ್ಯ ಮುಖಂಡರಾದ ಡಾ. ಡಿ. ಜಿ. ಸಾಗರ ಮತ್ತು ಅರ್ಜುನ ಗೊಬ್ಬೂರ್ ಭಾಗವಹಿಸಿ ರಾಜ್ಯದಲ್ಲಿ ತೆಗೆದುಕೊಂಡ ನಿರ್ಣಯ ಮತ್ತು ಷರತ್ತುಗಳ ಬಗ್ಗೆ ಮಾತನಾಡಲಿದ್ದಾರೆ. ಕರ್ನಾಟಕ ವಿಧಾನ ಸಭೆ ಚುನಾವಣೆ ವ್ಯಾಪ್ತಿಗೆ ಬರುವ ಕಲಬುರಗಿ ಜಿಲ್ಲೆಯ ಕಲಬುರ್ಗಿ ಗ್ರಾಮೀಣ ಮತಕ್ಷೇತ್ರ(ಮೀಸಲು) ಅಭ್ಯರ್ಥಿ ರೇವು ನಾಯಕ ಬೆಳಮಗಿ ಮತ್ತು ಚಿತ್ತಾಪೂರ ಮತಕ್ಷೇತ್ರ (ಮಿಸಲು) ಕ್ಷೇತ್ರದ ಅಭ್ಯಾರ್ಥಿ ಪ್ರಿಯಾಂಕ ಖರ್ಗೆಯವರಿಗೆ ಬೆಂಬಲ ಸೂಚಿಸಲು ಬೃಹತ್ ಸಭೆ ನಡೆಸಲಾಗುತ್ತಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಮುಖಂಡ ಮಹಾದೇವ ತರನಳ್ಳಿ, ಸತೀಶ ಕೋಬಾಳಕರ ಇದ್ದರು.