ರಾತ್ರಿ ವೇಳೆಯಲ್ಲಿ ಉದ್ಯಾನವನದಲ್ಲಿ ಆಳಂದ ಮೂಲದ ಯುವಕನ ಕೊಲೆ

0
288

ಕಲಬುರಗಿ: ನಗರದ ವಸಂತ ನಗರ ಬಾಡಾವಣೆಯ ಉದ್ಯಾನವನದಲ್ಲಿ ಯುವಕ ಒರ್ವನ ಬರ್ಬರ ಕೊಲೆ ಮಾಡಿರುವ ಘಟನೆ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆಳಂದ ತಾಲ್ಲೂಕಿನ ಮಂಟಗಿ ರೋಡ ಹತ್ತಿರದ ನಿವಾಸಿಯಾಗಿರುವ ರವಿ ಶಿವಶಂಕರ (35) ಕೊಲೆಯಾದ ದುರ್ದೈವಿ, ನಿನ್ನೆ ರಾತ್ರಿ ಈತನು ನಗರದ ವಸಂತ ನಗರ ಬಡಾವಣೆಯ ಉದ್ಯಾನವನದಲ್ಲಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ.

Contact Your\'s Advertisement; 9902492681

ಪೂನಾದಲ್ಲಿ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರವಿಕುಮಾರ, ತನ್ನ ಅಕ್ಕ ಕಾಲಿನ ಶಸ್ತ್ರಚಿಕಿತ್ಸೆಗೆಂದು ಕಾಮರಡ್ಡಿ ಆಸ್ಪತ್ರೆಗೆ ದಾಖಲಾದ ಕಾರಣ ಭೇಟಿಯಾಗಲು ನಿನ್ನೆ ಸಾಯಂಕಾಲ ಆಸ್ಪತ್ರೆಗೆ ಆಗಮಿಸಿದ್ದರು, ಆದರೆ ಇಂದು ಬೆಳಗ್ಗೆ ಆಸ್ಪತ್ರೆ ಪಕ್ಕದ ಉದ್ಯಾನದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ರವಿಕಯಮಾರ ಜೇಬಿನಲ್ಲಿ ಹಣವಿದ್ದ ಕಾರಣ ದುಷ್ಕರ್ಮಿಗಳು ಹಣ ಕಸಿದುಕೊಂಡು ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಆಗಮಿಸಿದ ಸ್ಟೇಷನ್ ಬಜಾರ್ ಪೊಲೀಸರು ತನಿಖೆ ನಡೆಸುತ್ತಿದ್ದು, ಮೃತ ರವಿಯ ಶವ ನಗರ ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪೊಲೀಸರು ಆರೋಪಿಗಳ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here