ತಾಂಡಾಗಳ ಅಭಿವೃದ್ದಿಗೆ ಶ್ರಮ: ಪ್ರಿಯಾಂಕ್ ಖರ್ಗೆ

0
80

ಚಿತ್ತಾಪುರ: ನಾನು ಈಗ ಸಮಾಜಕಲ್ಯಾಣ ಸಚಿವನಾಗಿಲ್ಲದಿರಬಹುದು ಆದರೆ ಶಾಸಕನಾಗಿ ಸಮಾಜಕಲ್ಯಾಣ ಇಲಾಖೆಯಲ್ಲಿ ಕೈಗೊಳ್ಳಬೇಕಾಗಿರುವ ನನ್ನ ಎಲ್ಲ ಯೋಜನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ಬರುವಂತೆ ನಿಯಮಾವಳಿಗಳನ್ನೇ ರೂಪಿಸಿದ್ದೇನೆ. ಹಾಗಾಗಿ, ತಾಂಡಾಗಳ ಅಭಿವೃದ್ದಿಯ ನನ್ನ ಮಹಾತ್ವಾಕಾಂಕ್ಷೆ ಕಾರ್ಯರೂಪಕ್ಕೆ ಬರುತ್ತದೆ ಈ ಕುರಿತು ಯಾವುದೇ ಆತಂಕ ಬೇಡ ಎಂದು ಶಾಸಕರಾದ ಸನ್ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆ ನುಡಿದರು.

ಮಹಾನಗರ ತಾಂಡದಲ್ಲಿ ಸೇವಾಲಾಲ್ ದೇವಸ್ಥಾನದ ಕಂಪೌಂಡ್ ನಿರ್ಮಾಣ, ಸಾಂಸ್ಕೃತಿಕ ಕೇಂದ್ರ, ಸಿಸಿ ರಸ್ತೆ, ಕೊಳವೆಬಾವಿಗೆ ಪೈಪ್ ಲೈನ್ ಅಳವಡಿಕೆ ಸೇರಿದಂತೆ ರೂ 50 ಲಕ್ಷ ಮೊತ್ತದ‌ ವಿವಿಧ ಅಭಿವೃದ್ದಿ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ನಾನು ಸಚಿವನಾಗಿದ್ದಾಗ ತಾಂಡಾಗಳ ಅಭಿವೃದ್ದಿಗಾಗಿ ಸೇವಾಲಾಲ ಅಧ್ಯಯನ‌ ಕೇಂದ್ರ, ಮೂಲಭೂತ ಸೌಲಭ್ಯಗಳನ್ನು ಒದಗಿಸಲು ತಾಂಡಾ ಪ್ರಗತಿ ಕಾಲನಿ, ಸಿಸಿ ರಸ್ತೆ ನಿರ್ಮಾಣ, ಬೀದಿ ದೀಪ ಮುಂತಾದ ಯೋಜನೆಗಳ ಜಾರಿಗೆ ಪ್ರತಿ ತಾಂಡಕ್ಕೆ‌ ರೂ 50 ಕೋಟಿ ಬಿಡುಗಡೆ ಮಾಡಿದ್ದೇನೆ. ಸೇವಾಲಾಲರ ಪುಣ್ಯಕ್ಷೇತ್ರ ದಾವಣಗೆರೆ ಜಿಲ್ಲೆಯ ಸೊರಗೊಂಡನಕೊಪ್ಪದ ಸಮಗ್ರ ಅಭಿವೃದ್ದಿಗೆ ರೂ 200 ಕೋಟಿ ಬಿಡುಗಡೆ ಮಾಡಿಸಿದ್ದೇನೆ. ತಾಂಡಾ ಅಭಿವೃದ್ದಿಗೆ ನಾನೂ ಈಗಲೂ ಬದ್ದನಾಗಿದ್ದು, ನನ್ಮ ಅವಧಿಯಲ್ಲಿನ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ತಾಂಡಾ ನಿವಾಸಿಗಳು ಕೇವಲ ಜಾತಿಯಾಧಾರಿತ ಮತದಾನ ಮಾಡದೇ ಯಾರು ಅಭಿವೃದ್ದಿ ಮಾಡುತ್ತಾರೋ ಅಂತವರನ್ನು ಆರಿಸಿ ಕಳಿಸಬೇಕು ಎಂದು ಕರೆ ನೀಡಿದ ಪ್ರಿಯಾಂಕ್ ಖರ್ಗೆ ಅವರು ಧರ್ಮದಾಧರಿತ ಮತಯಾಚನೆ ಅಥವಾ ಮತದಾನ ಅಭಿವೃದ್ದಿಗೆ ಕಂಟಕವಾಗುವ ಅಪಾಯವಿದೆ ಎಂದು ಎಚ್ಚರಿಸಿದರು. ಜೇವಸಿಂಗ್ ಮಹಾರಾಜರು ಬೇರೆಯವರಿಗೆ ಆಶೀರ್ವಾದ ಮಾಡಿದಂತೆ ನನಗೂ ಆಶೀರ್ವಾದ ಮಾಡಲಿ, ನೀವೆಲ್ಲ ನನಗೆ ಶಕ್ತಿ ತುಂಬಿ ಇನ್ನಷ್ಟು ಸೇವೆ ಮಾಡುವ ಅವಕಾಶ ನೀಡಿ ಎಂದು ಮನವಿ ಮಾಡಿದರು.

ವೇದಿಕೆ ಮೇಲೆ ಜೇವಸಿಂಗ್ ಮಹಾರಾಜ್, ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಶಿವಾನಂದ ಪಾಟೀಲ್, ರಮೇಶ ಮರಗೋಡ‌ ಸೇರಿದಂತೆ ಮತ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here