ಗಾಣಿಗ ಸಮಾಜಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯಕ್ಕೆ ಆಗ್ರಹ

0
62

ಕಲಬುರಗಿ: ಗಾಣಿಗ ಸಮಾಜದ ಹಿರಿಯ ನಾಯಕ ಸತತ ನಾಲ್ಕು ಬಾರಿ ಶಾಸಕರಾಗಿರುವ ಭದ್ರಾವತಿಯ ಸಂಗಮೇಶ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಗಾಣಿಗ ಸಮಾಜದ ಅಗ್ರಗಣ್ಯ ನಾಯಕ ಲಕ್ಷ್ಮಣ ಸವದಿ ಅವರನ್ನು ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಪರಿಗಣಿಸದಿರುವುದನ್ನು ಗುಲ್ಬರ್ಗ ಡಿಸ್ಟ್ರಿಕ್ಟ್ ಹಿಂದೂ ಗಾಣಿಗ ಸಮಾಜ ತೀವ್ರವಾಗಿ ಖಂಡಿಸಿದೆ.

ರಾಜ್ಯದಲ್ಲಿ ಸುಮಾರು 65 ಲಕ್ಷ ಜನಸಂಖ್ಯೆ ಹೊಂದಿರುವ ಸಮಾಜವನ್ನು ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಪರಿಗಣಿಸದಿರುವುದು ಅಪಾರ ನೋವುಂಟು ಮಾಡಿದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ಶರಣು ಬಿಲ್ಲಾಡ ಹಾಗೂ ಕಾರ್ಯದರ್ಶಿ ಈಶ್ವರಗೌಡ ಪಾಟೀಲ ತಿಳಿಸಿದರು.

Contact Your\'s Advertisement; 9902492681

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನಮಾನಗಳಲ್ಲಿ ಸರ್ಕಾರದಲ್ಲಿ ಇವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಘೋಷಣೆ ಮಾಡಿರುವಂತೆ ಗಾಣಿಗ ಸಮಾಜಕ್ಕೆ ಐದು ವರ್ಷದಲ್ಲಿ 2500 ಕೋಟಿ ರೂ. ಅನುದಾನ ಒದಗಿಸುವ ಮೂಲಕ ಸಮಾಜದ ಸವಾರ್ಂಗೀಣ ಅಭಿವೃದ್ಧಿಗೆ ಕಾರಣರಾಗಬೇಕು ಎಂದು ಮನವಿ ಮಾಡಿದರು.

ಸುರೇಶ ನೇದಲಗಿ, ಬಸವರಾಜಗೌಡ ಪಾಟೀಲ ಕುಕನೂರ, ಮಹಾಂತೇಶ ಕೊನ್ನೂರ, ನಿಂಗನೌಡ ಪಾಟೀಲ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here