ಶಹಾಪುರ: ಕಲ್ಯಾಣ ಕರ್ನಾಟಕ ಕಾರ್ಮಿಕ ವೇದಿಕೆಯ ಶಹಾಪುರ ತಾಲೂಕಿನ ಅಧ್ಯಕ್ಷರನ್ನಾಗಿ ಇಸ್ಮಾಯಿಲ್ ಸಂಗ್ರಾಮ್ ಇವರನ್ನು ಕಲ್ಯಾಣ ಕರ್ನಾಟಕ ಕಾರ್ಮಿಕ ವೇದಿಕೆ ಸಂಸ್ಥಾಪಕ ಹಾಗೂ ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾರ್ಜುನ ಮೇಟಿ ನೇಮಕ ಮಾಡಿ ಆದೇಶ ಹೋರಡಿಸಿದ್ದಾರೆ.
ಸೋಮವಾರ ಸಂಘಟನಯ ಕಚೇರಿಯಲ್ಲಿ ಸಂಘದ ಸದಸ್ಯರ ಸಮ್ಮುಖದಲ್ಲಿ ನೇಮಕ ಪತ್ರ ನೀಡಿ ಸನ್ಮಾನಿಸಲಾಯಿತು. ಈ ವೇಳೆ ನಾಗರಾಜ್ ಸಹು, ಶರಣಪ್ಪ ಹೊತಪೆಟ್, ಇಮ್ರಾನ್ ಅಫ್ಘಾನ್, ಸೈಯದ್ ಖಾಜಿ, ಸಾಜಿದ್ ಕಲೈಘರ್ ಸೇರಿದಂತೆ ಅನೇಕರು ಇದ್ದರು.