ಕಲಬುರಗಿ: ಗುಲ್ಬರ್ಗ ಜಿಲ್ಲೆಯ ಶಹಪುರ ತಾಲೂಕಿನ ಹುನಕುಂಟ ಗ್ರಾಮದಲ್ಲಿ ಹಾಲುಮತ ಪೂಜಾರಿಗಳ ಧರ್ಮಸಭೆಯನ್ನು ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು ಊರಿನ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆಯನ್ನು ಮಾಡಲಾಯಿತು.
ಹನುಮಾನ್ ದೇವಸ್ಥಾನದಲ್ಲಿ ಶ್ರೀ ಜಟ್ಟಿಂಗೇಶ್ವರ ದೇವಸ್ಥಾನದಲ್ಲಿ ಎಲ್ಲ ಪೂಜರೆಂದು ವಿಶೇಷ ಪೂಜೆಯನ್ನು ಮಾಡಲಾಯಿತು ನಂತರ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಬೀರಲಿಂಗೇಶ್ವರನಿಗೆ ಕರ್ತೃಗದ್ದಿಗೆ ವಿಶೇಷ ಪೂಜೆ ಯನ್ನು ದೀಪ ಬೆಳಗುವುದರೊಂದಿಗೆ ಪ್ರಾರಂಭಿಸಲಾಯಿತು. ಅಧ್ಯಕ್ಷತೆಯನ್ನು ದೊಡ್ಮನ ಮುತ್ಯಾ ಪೂಜಾರಿ ವಹಿಸಿದರು.
ಸಾನಿಧ್ಯವನ್ನು ಮಾಳಿಂಗರಾಯ ಮಾರಾಯರು ರಾಜ್ಯ ಮಟ್ಟದಲ್ಲಿ ಒಂದುಗೂಡಿ ನಮ್ಮ ಹಿರಿಯರು ಹಾಕಿಕೊಂಡು ಮಾರ್ಗದಲ್ಲಿ ಧರ್ಮಸ್ ಧರ್ಮವನ್ನು ಮುನ್ನಡೆಸಿಕೊಂಡು ಹೋಗೋಣ ಎಂದರು ವಾಸ್ತವ್ಯಕವಾಗಿ ಮಾತನಾಡಿದೆ ಮಾಜಿ ನಿರ್ದೇಶಕ ಬೀರಪ್ಪ ಜುಮುನಾಳ ಮಾತನಾಡಿದರು.
ಕರ್ನಾಟಕ ರಾಜ್ಯ ಪಟ್ಟದ ಪೂಜಾರಿಗಳ ಹಾಗೂ ಜಡೆತಲೆ ಪೂಜಾರಿಗಳ ಧರ್ಮದ ವಸ್ತುಗಳಾದ ಭಂಡಾರ ಡೊಳ್ಳು ಬೆತ್ತ ಹಾಗೂ ಕಂಬಳಿ ಹಾಲುಮತದ ಪೂಜನೆಯ ವಸ್ತುಗಳಾಗಿವೆ ಅವುಗಳನ್ನು ಶ್ರದ್ಧೆಯಿಂದ ಉಪಯೋಗಿಸಬೇಕು ಹಾಗೂ ನಮ್ಮ ಧರ್ಮದ ಪೂಜಾರಿಗೆ ಸರ್ಕಾರದಿಂದ ಮಾಶಾಸನ ಹಾಗೂ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಎಲ್ಲ ದೇವಸ್ಥಾನಗಳಿಗೆ ವಿಶೇಷ ಅನುದಾನವನ್ನು ನೀಡಬೇಕೆಂದರು ಗೌರವಧ್ಯಕ್ಷರಾದ ಮಾಲಹಳ್ಳಿಯ ಕೆಂಚರಾಯ ಮಾರಾಯ ಎಲ್ಲಾ ಹಾಲುಮತದ ಪೂಜ್ಯರು ಒತ್ತಾಯಿಸಿದರು.
ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಜಿಲ್ಲಾಧ್ಯಕ್ಷ ಬಸವರಾಜ ಮದ್ರಿಕಿ, ವಿಜಯ ಕಂಠೀಕರ, ಸಾಬಣ್ಣ ಕೊಲ್ಲೂರ, ಮಲ್ಕಪ್ಪ ಮುದ್ದಾ ಉಪಸ್ಥಿತರಿದ್ದರು