ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಬ್ರಹ್ಮಶ್ರೀ ನಾರಯಣ ಗುರುಗಳ 169 ನೇ ಜಯಂತಿಯನ್ನು ಆಚರಿಸಲಾಯಿತು.
ಪಕ್ಷದ ಮುಖಂಡರು ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಎಂದು ಜಗತ್ತಿಗೆ ಸಾರಿ, ಸಮಾಜದಲ್ಲಿ ಸಮಾನತೆಗಾಗಿ ಶ್ರಮಿಸಿದ ಮಹಾನ ಸಂತರು ಎಂದು ಜೈ ಘೋಷಣೆ ಮಾಡಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಸಿದ್ದಣ್ಣ ಕಲ್ಲಶೆಟ್ಟಿ, ರಾಮಚಂದ್ರ ರಡ್ಡಿ, ಯುವ ಮುಖಂಡರಾದ ವಿಠಲ ನಾಯಕ,ತಾಲ್ಲೂಕು ಉಪಾಧ್ಯಕ್ಷ ವೀರಣ್ಣ ಯಾರಿ, ಪುರಸಭೆ ಮಾಜಿ ಸದಸ್ಯ ರವಿ ನಾಯಕ,ಚಂದ್ರಶೇಖರ ಬೆಣ್ಣೂರಕರ್,ಸಂಜಯ ಕೊಲ್ಲುರಕರ್, ಮಲ್ಲು ಇಂದೂರ ಸೇರಿದಂತೆ ಇತರರು ಇದ್ದರು.