ಕಲಬುರಗಿ: ಕಲ್ಲು ಎತ್ತಿಹಾಕಿ ವ್ಯಕ್ತಿ ಬರ್ಬರವಾಗಿ ಹತ್ಯೆ

0
65

ಕಲಬುರಗಿ: ವ್ಯಕ್ತಿಯೋರ್ವನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ಬುಧವಾರ ಸಂಜೆ ನಗರದ ಬ್ರಹ್ಮಪೂರ ಪೊಲೀಸ್ ಠಾಣೆ ವ್ಯಾಪ್ತಿಯ ಮಕ್ತಂಪೂರ ಬಡಾವಣೆಯ ಬಾಲಾಜಿ ಮಂದಿರ ಹತ್ತಿರ ನಡೆದಿದೆ.

ಮಕ್ತಂಪೂರದ ಬಡಾವಣೆಯ ಸುರೇಶ ಬಸವರಾಜ ಹಂಚೆ (54) ಕೊಲೆಯಾದ ವ್ಯಕ್ತಿ. ಹತ್ಯೆಗೆ ನಿಖರವಾಗಿ ಕಾರಣ ತಿಳಿದುಬಂದಿಲ್ಲ. ಕಪಡಾ ಬಜಾರದ ಬಿ.ಎಸ್. ಟೇಲರ್ ಅಂಗಡಿ ನಡೆಸುತ್ತಿದ್ದ, ಸುರೇಶ್ ಮಕ್ತಂಪೂರ ಬಡಾವಣೆಯ ಗದ್ಗುಗೆ ಮಠದ ಎದುರುಗಡೆ ಮನೆಯಲ್ಲಿ ಕಿರಣಾ ಅಂಗಡಿ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.

Contact Your\'s Advertisement; 9902492681

ಘಟನಾ ಸ್ಥಳಕ್ಕೆ ಡಿಸಿಪಿ ಕನಿಕಾ ಸಿಕ್ರಿವಾಲ್, ಬ್ರಹ್ಮಪೂರ ಠಾಣೆಯ ಇನ್‌ಚಾರ್ಜ ಪಿಐ ಸೋಮಲಿಂಗ ಕರದಳ್ಳಿ, ಅವರುಗಳು ಸಿಬ್ಬಂದಿ ಸ್ಥಳಕ್ಕೆ ಭೇಟಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here