ಕಲಬುರಗಿ: ನಗರದ ಶೇಖ್ ರೋಜಾ ಫಿಲ್ಟರ್ ಬೆಡ್ ಆಶ್ರಯ ಕಾಲೋನಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಶನಿವಾರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಲೆ) ಜಿಲ್ಲಾಘಟಕ ದಿಂದ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ನಿವಾಸದ ಎದುರು ಧರಣಿ ನಡೆಸಲಾಯಿತು.
ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎ.ಬಿ ಹೊಸಮನಿ, ಜಿಲ್ಲಾಧ್ಯಕ್ಷ ಹುಸೇನ್ ಬಾಬಾ, ಉಪಾಧ್ಯಕ್ಷರಾದ ರಘುರಾಮ ಕಡೆಕಾರ್, ಮಹಾದೇವ ಅಣವರಕರ್, ಜಿಲ್ಲಾ ಪ್ರ.ಕಾರ್ಯದರ್ಶಿ ಮಿಲಿಂದ ಕಣಮುಸ, ಸಂಘಟನಾ ಕಾರ್ಯದರ್ಶಿ ಮಹಾಂತೇಶ ಹೂವಿನಹಳ್ಳಿ, ಮಹಿಳಾ ಘಟಕದ ಅಧ್ಯಕ್ಷೆ ಗುಂಡಮ್ಮ ದೊಡ್ಡಮನಿ, ಮುಖಂಡರಾದ ಚಂದ್ರಕಾಂತ ಬೀರೆದಾರ, ಭೀಮಾಶಂಕರ, ಶಾಮಬಾಯಿ ಪೂಜಾರಿ ಸೇರಿದಂತೆ ಹಲವರು ಪಾಲ್ಗೊಂಡರು.