ಕಮಲಾಪುರ: ಚಾಕುವಿನಿಂದ ಚುಚ್ಚಿ ವೃಕ್ತಿಯ ಹತ್ಯೆ

0
47

ಕಲಬುರಗಿ: ವ್ಯಕ್ತಿ ಒರ್ವನಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಇಲ್ಲಿನ ಕಮಲಾಪುರ ತಾಲೂಕಿನ ರೈಲ್ವೆ ಸ್ಟೇಷನ್‌ ಹತ್ತಿರ ಸಂಭವಿಸಿರುವುದ ಬೆಳಕಿಗೆ ಬಂದಿದೆ.

ಜೇವರ್ಗಿ ತಾಲ್ಲೂಕಿನ ಕೂಡಿ ದರ್ಗಾ ಗ್ರಾಮದ ನಿವಾಸಿ ಅಂಬಾರಾಯ ಶಂಕರ ಪಟ್ಟೇದಾರ (28) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿಯ ಎದೆಯ ಭಾಗಕ್ಕೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದ್ದು, ತನ್ನ ಪತ್ನಿಯ ತವರು ಮನೆಯಾ ಕಮಲಾಪುರ ತಾಲ್ಲೂಕಿನ ಬೆಳಕೋಟಾ ಗ್ರಾಮದಲ್ಲಿಯೇ ಕೆಲದಿನಗಳಿಂದ ಅಂಬರಾಯ ವಾಸವಾಗಿದ್ದ ಎಂದು ತಿಳಿದು ಬಂದಿದೆ.

Contact Your\'s Advertisement; 9902492681

ಡಿಸೆಂಬರ್‌ 29ರಂದು ಬೆಳಿಗ್ಗೆ ಕೆಲಸಕ್ಕೆಂದು ಕಲಬುರಗಿಗೆ ತೆರಳಿದ್ದ. ರಾತ್ರಿ ಮನೆಯವರೊಂದಿಗೆ ಫೋನ್‌ ಕರೆ ಮಾಡಿ ಮಾತನಾಡಿದ್ದ. ನಂತರ ಫೋನ್‌ ಸ್ವಿಚ್‌ ಆಫ್‌ ಆಗಿದೆ. 3 ದಿನಗಳಿಂದ ಅಂಬಾರಾಯ ಮನೆಗೆ ಬಾರದ ಕಾರಣ ಸಂಬಂಧಿಕರು ಮಹಾಗಾಂವ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ನಿನ್ನ, ರಾತ್ರಿ ಅಂಬರಾಯ ಕೊಲೆಯಾಗಿ ಪತ್ತೆಯಾಗಿದ್ದು, ಸ್ಥಳಕ್ಕೆ ಎಸ್‌ಪಿ ಅಟ್ಟೂರು ಶ್ರೀನಿವಾಸಲು, ಕಮಲಾಪುರ ಪೋಲಿಸ್‌ ಠಾಣೆ ಸಿಪಿಐ ಶಿವಶಂಕರ, ಪಿಎಸ್‌ಐ ಸಂಗೀತಾ ಶಿಂಧೆ, ಶಿವಶಂಕರ ಸುಬ್ಬೇದಾರ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here