ಕಲಬುರಗಿ: ಇಡೀ ದೇಶದಲ್ಲಿ ಇದೀಗ ಎಲ್ಲಿ ನೋಡಿದರಲ್ಲಿ ಫ್ರೀ ಶ್ರೀರಾಮಚಂದ್ರನ ಮಾತು. ಕಾರಣ ಅಯೋಧ್ಯೆಯಲ್ಲಿ ಉದ್ಘಾಟನೆಯಾಗಲಿದೆ ಭವ್ಯ ರಾಮ ಮಂದಿರ.. ಹೀಗಾಗಿ ಕಲಬುರಗಿಯಲ್ಲಿಯೂ ಶ್ರೀರಾಮನ ಜಪ ಜೋರಾಗಿದೆ ಎಲ್ಲರ ಮನೆಗಳಲ್ಲಿ ಸಂಭ್ರಮ ತುಂಬಿತುಳುಕುತ್ತಿದೆ ಪುಟ್ಟ ಪುಟಾಣಿಗಳೂ ಸಹ ಶ್ರೀರಾಮನ ವೇಷ ಭೂಷಣ ತೊಟ್ಟು ನಲಿದಾಡುತಿದ್ದಾರೆ.
ಇದೇ ವೇಳೆ ಬ್ಯಾಂಕ್ ಉದ್ಯೋಗಿ ಅಭಿಷೇಕ್ ಹಾಗೂ ಅಂಜಲಿ ಕುಲಕರ್ಣಿಯ ಪುಟ್ಟ ಮಗಳು ಚಂದ್ರಲಾ ಥೇಟ್ ರಾಮನ ಅವತಾರ ತಾಳಿದ್ದಾಳೆ. ಜನೆವರಿ 22 ರಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದ್ರೆ ಇತ್ತ ಕಲಬುರಗಿಯಲ್ಲಿ ರಾಮನ ಭಕ್ತರು ಮಕ್ಕಳಲ್ಲಿಯೇ ಶ್ರೀರಾಮನನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ.