ಚಾಟಿ ಏಟಿನ ಶರಣರೆಂದೆ ಖ್ಯಾತಿ ಪಡೆದವರು ಅಂಬಿಗರ ಚೌಡಯ್ಯನವರು

0
25

ಶಹಾಬಾದ:ಹನ್ನೇರಡನೇ ಶತಮಾನದ ಶರಣರಲ್ಲಿ ಚಾಟಿ ಏಟಿನ ಶರಣನೆಂದೆ ಖ್ಯಾತಿ ಪಡೆದ ಶರಣನೆಂದರೆ ಅಂಬಿಗರ ಚೌಡಯ್ಯನವರು ಎಂದು ಬಿಜೆಪಿ ಮುಖಂಡ ಸಾಯಬಣ್ಣ ಬೆಳಗುಂಪಿ ಹೇಳಿದರು.

ಅವರು ರವಿವಾರ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಇದ್ದದನ್ನು ಇದ್ದ ಹಾಗೇ ಹೇಳುವ ಎದೆಗಾರಿಕೆ ಅವರಲ್ಲಿತ್ತು. ಮೂಢನಂಬಿಕೆ ,ಕಂದಾಚಾರದ ವಿರುದ್ಧ ತಮ್ಮ ವಚನದಲ್ಲಿ ಕಟುವಾಗಿ ಖಂಡಿಸಿದ ಶರಣರು.ತನಗೆ ತೋಚಿದ್ದನ್ನು ತಾನು ಕಂಡದ್ದನ್ನು ಅಂದಿನ ಸಮಾಜದ ಅಂಕು ಡೊಂಕುಗಳನ್ನು ತನ್ನ ನೇರ ನಡೆನುಡಿಗಳಿಗೆ ವಚನ ರೂಪ ನೀಡಿದ ಅದರಂತೆ ಬದುಕಿ ಇತರರಿಗೆ ಮಾರ್ಗದರ್ಶನ ತೋರಿದ ನಿಜಶರಣ ಅಂಬಿಗರ ಚೌಡಯ್ಯ ಒಬ್ಬ ಆದರ್ಶ ಮಾನವ ಎಂದು ಹೇಳಿದರು.

ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಹಾಗೂ ಕನಕಪ್ಪ ದಂಡಗುಲಕರ್ ಮಾತನಾಡಿ,ಸ್ವಂತಿಕೆಯಿಂದ ಯೋಚಿಸಿ ಸ್ವಾಭಿಮಾನದ ಬದುಕನ್ನು ಬದುಕಬೇಕೆಂಬ ಅಂಶವನ್ನು ಅಂಬಿಗೆ ಚೌಡಯ್ಯನವರು ತಮ್ಮ ಸರಳ ಸುಲಲಿತ ವಚನಗಳಲ್ಲಿ ತಿಳಿಸಿದ್ದಾರೆ. ಜಾತೀಯತೆಯನ್ನು ಮೀರಿದ ವಸ್ತು ನಿಷ್ಠತೆ, ಸತ್ಯ ನಿಷ್ಠತೆ ಬದುಕು, ನಿಜವಾದ ಬದುಕು ಎಂಬುದಾಗಿ ಪ್ರತಿಪಾದಿಸಿದ ದಿಟ್ಟ ಮಾನವತವಾದಿ ಎಂದು ಹೇಳಿದರು.

ಮುಖಂಡರಾದ ಮಹಾದೇವ ಗೊಬ್ಬೂರಕರ, ಶ್ರೀಧರ ಜೋಶಿ, ಸದಾನಂದ ಕುಂಬಾರ, ಸಿದ್ರಾಮ ಕುಸಾಳೆ, ಚಂದ್ರಕಾಂತ ಗೊಬ್ಬೂರಕರ, ಬಸವರಾಜ ಬಿರಾದಾರ, ಸಾಬಣ್ಣ ಬೆಳಗುಂಪಿ, ನಿಂಗಣ್ಣ ಹುಳಗೊಳಕರ, ಕಾಶಣ್ಣ ಚನ್ನೂರ, ಯಲ್ಲಪ್ಪ ದಂಡಗುಲಕರ, ಶರಣು ವಸ್ರ್ತದ, ರಾಜು ಕುಂಬಾರ, ಅಮರ ಕೋರೆ, ದತ್ತಾತ್ರೇಯ ಗಂಟಿ, ಶ್ರೀನೀವಾಸ ದೇವಕರ, ಮೊಹನ ಹಳ್ಳಿ, ನಿಂಗಾರೆಡ್ಡಿ ಗೊಳಾ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here