ಓರಿಯಂಟ್ ಸಿಮೆಂಟ್ ಕಂಪನಿ ಎದರುಗಡೆ ರೈತರಿಂದ ಪ್ರತಿಭಟನೆ

0
21

ಕಲಬುರಗಿ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಫೆ.17 ರಂದು ಸಾಂಯಾಕಾಲ 5 ಗಂಟೆಗೆ ಚಿತ್ತಾಪುರ ತಾಲೂಕಿನ ಇಟಗಾ ಗ್ರಾಮದ ಓರಿಯಂಟ್ ಸಿಮೆಂಟ್ ಕಂಪೆನಿ ಎದರುಗಡೆ ರೈತರು ಬೃಹತ್ ಪ್ರತಿಭಟನೆ ನಡೆಸಿದರು.

ನಂತರ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಶರಣಪ್ಪ ಮಮಶೆಟ್ಟಿ ಮಾತನಾಡಿ, ಓರಿಯಂಟ್ ಸಿಮೆಂಟ್ ಕಂಪೆನಿಗೆ ಇಟಗಾ, ಮೊಗಲಾ, ಸ್ಟೇಷನ್ ತಾಂಡಾ, ದಿಗ್ಗಾಂವ ಗ್ರಾಮಗಳ ರೈತರು ಭೂಮಿ ನೀಡಿದ್ದಾರೆ. ಆದರೆ ರೈತರಿಗೆ ಓರಿಯಂಟ್ ಸಿಮೆಂಟ್ ಕಂಪೆನಿಯವರು ಸುಳ್ಳು ಭರವಸೆಗಳನ್ನು ನೀಡುವುದರ ಮೂಲಕ ವಂಚಿಸಿದೆ‌. ಹೀಗಾಗಿ ರೈತರಿಗೆ ಸೂಕ್ತ ಬೆಲೆ, ಉದ್ಯೋಗ ನೀಡುವರೆಗೂ ಎರಡನೇ ಪ್ಲಾಂಟ್ ನಿರ್ಮಾಣ ಮಾಡಲು ಬೀಡುವುದಿಲ್ಲ ಎಂದು ಆಗ್ರಹಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಸಾಬಣ್ಣ ಗುಡುಬಾ ಹಾಗೂ ಇಟಗಾ, ದಿಗ್ಗಾಂವ, ಮೊಗಲಾ ಗ್ರಾಮದ ರೈತರು ಇದ್ದರು.

ಎಂ.ಡಿ ಮಶಾಖ ಚಿತ್ತಾಪುರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here