ತಿಂಥಣಿ: ಪತಿಯಿಂದ ಪತ್ನಿಯ ಕೊಲೆ ಆರೋಪ; ಆರೋಪಿ ಪತಿಯ ಬಂಧನ

0
15

ಸುರಪುರ: ತಾಲೂಕಿನ ತಿಂಥಣಿ ಗ್ರಾಮದಲ್ಲಿ ಪತ್ನಿಗೆ ಕಿರಕುಳ ನೀಡಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದ್ದು,ಆರೋಪಿ ಪತಿಯನ್ನು ಪೊಲೀಶರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ತಿಂಥಣಿ ಗ್ರಾಮದ ಹಣಮಂತ ಎನ್ನುವ ವ್ಯಕ್ತಿ ತನ್ನ ಪತ್ನಿ ಶ್ರೀದೇವಿ ಎನ್ನುವವರಿಗೆ ಕಳೆದ ಅನೇಕ ವರ್ಷಗಳಿಂದ ಕಿರಕುಳ ನೀಡುತ್ತಿದ್ದ ಎಂದು ಮೃತ ಶ್ರೀದೇವಿಯ ಸಂಬಂಧಿಕರು ಆರೋಪಿಸಿದ್ದಾರೆ.

ನೀನು ಬೇರೆಯವರೊಂದಿಗೆ ಮಾತನಾಡಬಾರದು ಎನ್ನುವುದು ಸೇರಿದಂತೆ ಪ್ರತಿ ಸಮಯಕ್ಕೆ ಅನುಮಾನಪಡುತ್ತಿದ್ದ,ಶ್ರೀದೇವಿಗೆ ಕಿರಕುಳವನ್ನು ನೀಡುತ್ತಿದ್ದ ಇದರಿಂದ ಬೇಸತ್ತು ಕಳೆದ ಒಂದು ತಿಂಗಳ ಹಿಂದೆ ನಮ್ಮ ಊರಾದ ಯಡ್ರಾಮಿ ತಾಲೂಕಿನ ಜಮಖಂಡಿಗೆ ಬಂದಿದ್ದಳು,ನಂತರ ಈಗ ಕೊಲೆ ಮಾಡಿರುವ ಹಣಮಂತ ತಾನೇ ನಮ್ಮ ಮನೆಗೆ ಬಂದು ನನ್ನಿಂದ ತಪ್ಪಾಗಿದೆ. ಈ ಮುಂದೆ ಯಾವುದೇ ಜಗಳ ಮಾಡದೇ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿ ಕರೆದುಕೊಂಡು ಬಂದಿದ್ದ,ಬಂದು ಈಗ ಎರಡು ವಾರಗಳಾಗಿದ್ದವು,ಆದರೆ ಈಗ ಬುಧವಾರ ರಾತ್ರಿ ಶ್ರೀದೇವಿಗೆ ಕುತ್ತಿಗೆಗೆ ಬಟ್ಟೆ ಬಿಗಿದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದರು.

Contact Your\'s Advertisement; 9902492681

ಕೊಲೆ ಮಾಡಿ ತಂದು ಮನೆಯ ಹೊರಗಡೆ ಕಟ್ಟೆ ಮೇಲೆ ಹಾಕಿದ್ದಾನೆ,ನಂತರ ಅಲ್ಲಿಯ ಬೇರೆಯವರು ರಾತ್ರಿ ಕರೆ ಮಾಡಿ ತಿಳಿಸಿದ್ದರಿಂದ ಬೆಳಿಗ್ಗೆ ನಾವು ಬಂದು ನೋಡಿದ್ದೇವೆ,ನಮ್ಮ ಮಗಳನ್ನು ಕೊಲೆ ಮಾಡಿರುವ ಹಣಮಂತನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮೃತ ಶ್ರೀದೇವಿಯ ಅಣ್ಣ ಭೀಮರಾಯ ಆಗ್ರಹಿಸಿದರು.

ರಾತ್ರಿಯೇ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಆರೋಪಿ ಹಣಮಂತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here