ಆರ್ಯ ಈಡಿಗ ಸಮಾಜದ ಜನರು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ; ಶಂಕರಗೌಡ ರಾವೂರಕರ್

0
120
  • ಎಂ.ಡಿ‌ ಮಶಾಖ ಚಿತ್ತಾಪುರ

ಚಿತ್ತಾಪುರ: ಆರ್ಯ ಈಡಿಗ ಸಮಾಜದ ಜನರು ಸರ್ವಾನುಮತದಿಂದ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಆರ್ಯ ಈಡಿಗ ಸಮಾಜದ ನೂತನ ಅಧ್ಯಕ್ಷ ಶಂಕರಗೌಡ ರಾವೂರಕರ್ ಹೇಳಿದರು.

ಚಿತ್ತಾಪುರ ಪಟ್ಟಣದಲ್ಲಿ ಮಾ.19 ರಂದು ಸಾಯಾಂಕಾಲ 4 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನನ್ನು ಯಾರು ಗುಂಪುಗಾರಿಕೆ ನಡೆಸಿ ಅಧ್ಯಕ್ಷರನ್ನಾಗಿ ಮಾಡಿಲ್ಲ. ಆದರೆ ಹಿಂದಿನ ಅಧ್ಯಕ್ಷರು ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ. ಅವರು ಸಹ ಸಮಾಜದ ಜನರ ಏಳಿಗೆಗೆ ಶ್ರಮಿಸಲು ಬೆಂಬಲ ನೀಡಬೇಕು ಎಂದು ಹೇಳಿದರು‌.

Contact Your\'s Advertisement; 9902492681

ಈ ಸಂದರ್ಭದಲ್ಲಿ ವಿನೋದ್ ಗುತ್ತೇದಾರ, ಕಾಶಿನಾಥ ಗುತ್ತೇದಾರ, ಪಂಕಜ್ ಗೌಡ, ಹುಸನಯ್ಯ ಗುತ್ತೇದಾರ, ಯಲ್ಲಯ್ಯ ಕಲಾಲ್, ಆನಂದ ರಾವೂರಕರ್, ಆನಂದ ಗುತ್ತೇದಾರ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here