ಚಿತ್ತಾಪುರ: ಆರ್ಯ ಈಡಿಗಾ ಸಮಾಜದ ಅಧ್ಯಕ್ಷರನ್ನಾಗಿ ಶಂಕರಗೌಡ ರಾವೂರಕರ್ ನೇಮಕ‌

0
328
  • ಎಂ.ಡಿ ಮಶಾಖ ಚಿತ್ತಾಪು,ರ

ಚಿತ್ತಾಪುರ: ಆರ್ಯ ಈಡಿಗಾ ಸಮಾಜದ ನೂತನ ತಾಲೂಕು ಅಧ್ಯಕ್ಷರನ್ನಾಗಿ ಶಂಕರಗೌಡ ರಾವೂರಕರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ರಾಜೇಶ ಗುತ್ತೇದಾರ ಹೇಳಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದಿನ ಅಧ್ಯಕ್ಷರಾಗಿದ್ದ ನಾಗಯ್ಯ ಗುತ್ತೇದಾರ ಅವರನ್ನು ಒಂದು ವರ್ಷದ ಅವಧಿಗಾಗಿ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಹೀಗಾಗಿ ಅವರ ಒಂದು ವರ್ಷದ ಅವಧಿ ಮುಗಿದ ಕಾರಣ ಸಮಾಜದವರ ಜೊತೆ ಚರ್ಚಿಸಿ ಶಂಕರಗೌಡ ರಾವೂರಕರ್ ಅವರನ್ನು ಎಲ್ಲರ ಒಮ್ಮತದ ಮೇರೆಗೆ ಆಯ್ಕೆ ಮಾಡಲಾಗಿದೆ ಎಂದರು.

Contact Your\'s Advertisement; 9902492681

ಇದೇ ವೆಳೆ ಜಿಲ್ಲಾಧ್ಯಕ್ಷ ರಾಜೇಶ ಗುತ್ತೇದಾರ ಅವರು ಶಂಕರಗೌಡ ರಾವೂರಕರ್ ಅವರಿಗೆ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಿದ ನೇಮಕಾತಿ ಆದೇಶ ಪ್ರತಿ ನೀಡಿದರು.
ಈ ಸಂದರ್ಭದಲ್ಲಿ ಆರ್ಯ ಈಡಿಗಾ ಸಮಾಜದ ಅನೇಕ ಮುಖಂಡರು ಹಾಗೂ ಪದಾಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here