ಕಲ್ಯಾಣ ಕರ್ನಾಟಕ ಸೇನೆಯ ಗೌರವಾಧ್ಯಕ್ಷರಾಗಿ ರಮೇಶ ಬೀದರಕರ್ ನೇಮಕ

0
86

ಕಲಬುರಗಿ: ಕಲ್ಯಾಣ ಕರ್ನಾಟಕ ಸೇನೆಯ ಕಚೇರಿಯಲ್ಲಿ ಮಂಗಳವಾರ ಸೇನೆಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ಸಭೆ ನಡೆಸಿ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷರಾದ ದತ್ತು ಹಯ್ಯಾಳಕರ್ ಅಧ್ಯಕ್ಷತೆಯಲ್ಲಿ ಕಲ್ಯಾಣಕರ್ನಾಟಕ ಸೇನೆಯ ನೂತನ ಸಂಘಟನಾ ಗೌರವಾಧ್ಯಕ್ಷರನ್ನಾಗಿ ರಮೇಶ ಬೀದರಕರ್ ಅವರನ್ನು ನೇಮಕ ಮಾಡಲಾಯಿತು.

ಈ ಸಭೆಯಲ್ಲಿ ದತ್ತು ಹಯ್ಯಾಳಕರ್ ಮಾತನಾಡಿ ಕಲ್ಯಾಣ ಕರ್ನಾಟಕ ಸೇನೆಯ ಸಂಘಟನಾ ಸಲಹೆಗಾರರಾ ರಮೇಶ ಬೀದರಕರ್ ಅವರು 8. ವರ್ಷ ಕೆಲಸ ಮಾಡಿದಕ್ಕಾಗಿ ಇವರನ್ನು ಗುರುತಿಸಿ ಸಭೆ ನಡೆಸಿ ಇವರನ್ನು ಗೌರವಾಧ್ಯಕ್ಷರನ್ನಾಗಿ ಮಾಡಲಾಯಿತು.

Contact Your\'s Advertisement; 9902492681

ಸಮಾಜ ಮುಖಿ ಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ರಮೇಶ ಬೀದರಕರ್ ಇವರು ಸರಳತೆ, ಸಮಾಜಸೇವೆ ಮತ್ತು ಹೋರಾಟದ ಮನೋಭಾವನೆಯನ್ನು ಪರಿಗಣಿಸಿ ಇವರಿಗೆ ಈ ಸ್ಥಾನವನ್ನು ನೀಡಿದಿವೆ. ಸದರಿ ಸೇನೆಯ ನಿಯಮಾನುಸಾರ ರಾಜ್ಯದಲ್ಲಿ ಶಾಂತಿ ಸುವ್ಯ ವಸ್ಥೆಯನ್ನು ಕಾಪಾಡಿಕೊಂಡು ಹೋಗುವುದು, ಮಹಿಳೆಯರ ಮೇಲೆ ಹಾಗೂ ಶೋಷಿತರ ಮೇಲೆ ನಡೆಯುವ ಅನ್ಯಾಯ, ಅತ್ಯಾಚಾರ, ಶೋಷಣೆ, ದೌರ್ಜನ್ಯ ವಿರೋಧ ಸಂವಿಧಾನ ದಡಿಯಲ್ಲಿ ಹೋರಾಟದ ಮುಖಾಂತರ ನ್ಯಾಯ ದೊರಕಿಸಿಕೊಡುವುದರೊಂದಿಗೆ ಸಂಘಟನೆಯನ್ನು ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಬಲಿಷ್ಠಗೊಳಿಸಿ ರಾಜ್ಯದ ಎಲ್ಲಾ ಜನರ ಕ್ಷೇಮಾಭಿವೃದ್ಧಿ ಏಳಿಗೆಗಾಗಿ ಇಂದಿನಿಂದಲೇ ಕಾರ್ಯಪ್ರವೃತ್ತರಾಗುವದರೊಂದಿಗೆ ಸಂಘಟನೆಯನ್ನು ಇನ್ನು ಹೆಚ್ಚಿನ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವುದು ಅತಿ ಅವಶ್ಯವಾಗಿದೆ ಎಂದು ಹಯ್ಯಾಳಕರ್ ಹೇಳಿದರು.

ಈ ಸಭೇಯಲ್ಲಿ ಕಾನೂನು ಸಲಹೆಗಾರರಾದ ರವೀಂದ್ರ ಟಿ. ವರ್ಮಾ, ಕಾಶೀನಾಥ ಮೇಲಿನಕೇರಿ, ಮಹಿಳಾ ಜಿಲ್ಲಾಧ್ಯಕ್ಷೆ ಶ್ರೀಮತಿ ಬಿ.ಗೋರಂಪಳ್ಳಿ, ಕಾರ್ಯದರ್ಶಿ ಶ್ರೀದೇವಿ ಮುತ್ತಂಗಿ, ಗಂಗಮ್ಮ ಗೋರೆಗೋಳ ಹಾಗೂ ಸೇನೆಯ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here