ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ: ವಿಶ್ವ ಅಸ್ತಮಾ ದಿನಾಚರಣೆಯ ಅಂಗವಾಗಿ ಸ್ಥಳೀಯ ಖಾಜಾ ಬಂದಾನವಾಜ ವಿವಿಯ ಖಾಜಾ ಬಂದಾನವಾಜ ಆಸ್ಪತ್ರೆಯ ಜನರಲ್ ಮೆಡಿಸಿನ್ ವಿಭಾಗದ ವತಿಯಿಂದ ಬುಧವಾರ ಅಸ್ತಮಾ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.

ಕೆಬಿಎನ್ ಆಸ್ಪತ್ರೆಯ ಮೆಡಿಕಲ್ ಸುಪರಿಟೆಂಡೆಂಟ್ ಡಾ. ಸಿದ್ದಲಿಂಗ ಚೆಂಗಟಿ ಮಾತನಾಡಿ ಅಸ್ತಮಾದ ಬಗ್ಗೆ ಜಾಗೃತಿ ಅವಶ್ಯ. ವರ್ಷಕ್ಕೆ ಲಕ್ಷಾಂತರ ಜನ ಇದರಿಂದ ಸಾವನಪ್ಪುತ್ತಿದ್ದಾರೆ. ಜನರನ್ನು ಶಿಕ್ಷಿತಗೊಳಿಸಿದಲ್ಲಿ ಅನಾಹುತವನ್ನು ತಪ್ಪಿಸಬಹುದು ಎಂದು ಹೇಳಿ ಜನರಲ್ ಮೆಡಿಸಿನ್ ವಿಭಾಗವನ್ನು ಶ್ಲಾಘಸಿದರು. ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೆ ಅಭಿನಂದಿಸಿದರು.

ಜನರಲ್ ಮೆಡಿಸಿನ್ ವಿಭಾಗದ ಡಾ. ಸುಮಂಗಲಾ ಅಸ್ತಮಾ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಅಸ್ತಮಾಕ್ಕೆ ಕಾರಣಗಳು,ಲಕ್ಷಣಗಳು, ಚಿಕಿತ್ಸೆ, ಅಸ್ತಮಾ ಪ್ರಕಾರಗಳು, ಆಹಾರ ಕ್ರಮ ಮುಂತಾದವುಗಳ ಬಗ್ಗೆ ಸರಳವಾಗಿ ತಿಳಿ ಹೇಳಿದರು.

ನಂತರ ಅಂಗಗಳ ರಕ್ಷಣೆ ಮತ್ತು ಮಧುಮೇಹ ನಿರ್ವಹಣೆ ವಿಷಯದ ಬಗ್ಗೆ ಪ್ಯಾನೆಲ್ ಚರ್ಚೆ ನಡೆಯಿತು. ಡಾ. ಸಾಗರ್ ಸೌರಬ್ ಎಂಡೋಕ್ರೈನೋಲೋಜಿಸ್ಟ್, ಡಾ. ಪೂರ್ಣಿಮಾ ತಡಕಲ್ ನೆಫ್ರಾಲಜಿಸ್ಟ್, ಡಾ. ಮಹೇಶ ಡಿ ಹಕ್ಕೆ ಎಂಡೋಕ್ರೈನೋಲೋಜಿಸ್ಟ್ ಪಾಲ್ಗೊಂಡಿದ್ದರು. ಡಾ. ಹಿಮಾಯತುಲ್ಲಾ ಪ್ಯಾನಲ್ ಚರ್ಚೆ ನಡೆಸಿಕೊಟ್ಟರು.

ಡಾ. ಚಂದ್ರಕಲಾ ಸ್ವಾಗತಿಸಿದರೆ, ಡಾ. ಗಿರೀಶ್ ರೋನಾಡ್ ವಂದಿಸಿದರು. ಡಾ. ಶ್ರೀ ರಾಜ್ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಡಾ. ಗುರುಪ್ರಸಾದ್, ಡಾ. ಪ್ರಶಾಂತ ಇ ಡಿ ಒಳಗೊಂಡಂತೆ ಒಟ್ಟು 60 ಜನರು ಪಾಲ್ಗೊಂಡಿದ್ದರು.

ಅಲ್ಲದೇ ಸೋಮವಾರ ಆಸ್ಪತ್ರೆಯಲ್ಲಿ ಜೆನೆರಲ್ ಮೆಡಿಸಿನ ವಿಭಾಗದಿಂದ ಉಚಿತ ಪಿ ಎಫ್ ಟಿ ತಪಾಸಣೆ ನಡೆಯಿತು. ಅಸ್ತಮಾ ಅಥವಾ ಶ್ವಾಸಕೋಶದ ಸಮಸ್ಯೆ ಕಂಡು ಬಂದ ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತು.

ಸುಮಾರು 100 ಕ್ಕೂ ಹೆಚ್ಚು ಜನರು ತಪಾಸಣೆಗೆ ಒಳಗಾದರು ಎಂದು ಸಂಘಟನಾ ಕಾರ್ಯದರ್ಶಿ ಡಾ. ಚಂದ್ರಕಲಾ ತಿಳಿಸಿದ್ದಾರೆ.

emedialine

Recent Posts

ಸುರಪುರ:ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಅಂಗವಾಗಿ ಪೂರ್ವಭಾವಿ ಸಭೆ

ಸುರಪುರ: ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಅಂಗವಾಗಿ ನಗರದ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ…

14 mins ago

ಕೃಷಿ ಇಲಾಖೆ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ

ಸುರಪುರ: ನಮ್ಮ ಸರಕಾರ ರೈತರಿಗಾಗಿ ಹಲವಾರು ಯೋಜನೆಗಳನ್ನು ಜೊರಿಗೊಳಿಸಿದ್ದು ರೈತರು ಸರಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳ ಬೇಕು ಎಂದು ಶಾಸಕ…

16 mins ago

ವಿದ್ಯಾರ್ಥಿನಿಯರಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಸೈಕಲ್‍ ವಿತರಣೆ

ಕಲಬುರಗಿ: ನಗರದ ಎನ್.ವಿ ಸಂಸ್ಥೆಯ ಸತ್ಯಪ್ರಮೋದತೀರ್ಥ ಸಭಾಂಗಣದಲ್ಲಿ ಎನ್.ವಿ ಸಂಸ್ಥೆ ಮತ್ತು ರೋಟರಿ ಕ್ಲಬ್ ಆಫ್ ಗುಲಬರ್ಗ ನಾರ್ಥವತಿಯಿಂದ ವಿದ್ಯಾರ್ಥಿನಿಯರಿಗೆ…

22 mins ago

ಕಲಬುರಗಿಯಲ್ಲಿ ರೈತರ ಜಿಲ್ಲಾ ಸಮಾವೇಶ

ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಶಾಖೆ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಿದ್ದ ಜಿಲ್ಲಾ ರೈತ ಸಮಾವೇಶವನ್ನು ಸಂಘದ…

24 mins ago

ಪ್ರಶಾಂತ ಡಿ ಜಾನಕರ ರಾಷ್ಟ್ರಮಟ್ಟಕ್ಕೆ ಆಯ್ಕೆ

ಕಲಬುರಗಿ: ದಾವಣಗೆರೆಯಲ್ಲಿ ನಡೆದ ಸಿ.ಬಿ.ಎಸ್.ಇ ಕ್ಲಸ್ಟರ 8ನೇ ಎಥ್ಲೇಟಿಕ್ ಮೀಟ್ 2024-25 ರಾಜ್ಯ ಮಟ್ಟದ 200 ಮಿಟರ್ ಓಟದ ಸ್ಪರ್ಧೆಯಲ್ಲಿ…

28 mins ago

ಶಿಕ್ಷಕಿ ನಿರ್ಮಲಾ ವೀರಭದ್ರಪ್ಪ ದೇಸಾಯಿಗೆ ಬಿಳ್ಕೊಡುಗೆ

ಕಲಬುರಗಿ: ಕಮಲಾಪೂರ ತಾಲೂಕಿನ ಯಕ್ಕಂಚಿ ಗ್ರಾಮದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ನಿರ್ಮಲಾ ವೀರಭದ್ರಪ್ಪ ದೇಸಾಯಿ ಇವರ…

32 mins ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420