ಕಲಬುರಗಿ; ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಉತ್ತರಾಧಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರ 29 ನೇ ಪೀಠಾರೋಹಣ ಮಹೋತ್ಸವದಂದು ಶ್ರೀರಾಮ ಸೇವಾ ಪರಿಷತ್ ವತಿಯಿಂದ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಯಲ್ಲಿ 80 ಪ್ರತಿಶತಕ್ಕಿಂತ ಅತ್ಯಧಿಕ ಅಂಕ ಪಡೆದ ವಿಪ್ರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪರಿಷತ್ ಅಧ್ಯಕ್ಷರಾದ ಗುಂಡಾಚಾರ್ಯ ಜೋಶಿ ನರಿಬೊಳ, ರಾಮಾಚಾರ್ಯ ಘಂಟಿ, ಡಾ ಪ್ರಹ್ಲಾದ ಭುರ್ಲಿ, ಡಿ ವಿ ಕುಲಕರ್ಣಿ, ಶಾಮರಾವ ಕುಲಕರ್ಣಿ, ಗೋಪಾಲರಾವ್. ಗುರುರಾಜ್ ಭರತನೂರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಅರ್ಚಕರಾದ ಗುಂಡಾಚಾರ್ಯ ಜೋಶಿ ಮಾತನಾಡಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೊತೆ ಸಂಸ್ಕಾರವನ್ನು ಕೊಡುವದು ಅವಶ್ಯ, ವಿದ್ಯಾರ್ಥಿ ಜೀವನದಲ್ಲಿ ಶಾಲಾ ಕಾಲೇಜು ಜೀವನದಲ್ಲಿ ಅಭ್ಯಾಸ ಚೆನ್ನಾಗಿ ಮಾಡಲೇಬೇಕು. ಜೊತೆಗೆ ನಮ್ಮ ಸನಾತನ ಧರ್ಮದ ರಕ್ಷಣೆಗಾಗಿ ಸಂಸ್ಕಾರವು ಅವಶ್ಯವಾಗಿ ಬೆಳೆಸಿಕೊಳ್ಳಬೇಕಾಗಿ ವಿನಂತಿಸಿಕೊಂಡರು.