ಜ್ಞಾನ ಎಂದಿಗೂ ಕಳವಾಗುವುದಿಲ್ಲ: ರಾಜ್ಯಪಾಲರು

0
21

ಬೆಂಗಳೂರು; ಮಾನವ ಜೀವನದ ಸುಧಾರಣೆ ಮತ್ತು ಪರಿಪೂರ್ಣತೆಯಲ್ಲಿ ಶಿಕ್ಷಣವೂ ಮಹತ್ತರ ಪಾತ್ರವಹಿಸುತ್ತದೆ. “ಯಾ ವಿದ್ಯಾ ಸಾ ವಿಮುಕ್ತಯೇ” ಎಂದರೆ ವಿದ್ಯೆ ಮತ್ತು ಜ್ಞಾನವು ನಮ್ಮನ್ನು ಮುಕ್ತಿಯೆಡೆಗೆ ಕೊಂಡೊಯ್ಯುತ್ತದೆ. ಕಲಿತ ಶಿಕ್ಷಣ ಹಾಗೂ ದೊರೆತ ಜ್ಞಾನವನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ಬೆಂಗಳೂರು ನಗರದ ಪುಟ್ಟಣ್ಣ ಚೆಟ್ಟಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯದ 11 ಘಟಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಸಂಸ್ಕøತÀವು ಭಾರತೀಯ ಸಂಪ್ರದಾಯದ ಜ್ಞಾನದ ಭಾμÉಯಾಗಿದೆ ಮತ್ತು ಇದನ್ನು ಅನೇಕ ಭಾμÉಗಳ ತಾಯಿ ಎಂದು ಪರಿಗಣಿಸಲಾಗಿದೆ. ಸಂಸ್ಕೃತ ಭಾμÉ ಭಾರತದ ಆತ್ಮ ಮತ್ತು ಅಪಾರ ಜ್ಞಾನದ ಧ್ವನಿ. ಹಿಂದೆ ಸಂಸ್ಕೃತವು ದೇಶದಾದ್ಯಂತ ವಿದ್ಯಾವಂತರಲ್ಲಿ ಪ್ರವಚನದ ಭಾμÉಯಾಗಿತ್ತು ಮತ್ತು ಪ್ರತಿ ಪ್ರಮುಖ ವಿಷಯದ ಮೇಲೆ ಬಳಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ ಎಂದರು.

ಸಂಸ್ಕೃತವು ವಿಶ್ವ ಸಹೋದರತ್ವ ಮತ್ತು ವಿಶ್ವ ಶಾಂತಿಯ ಸಂದೇಶವನ್ನು ನೀಡಿದೆ. ವಾಸುದೇವ ಕುಟುಂಬಕಂ (ಬ್ರಹ್ಮಾಂಡವು ಒಂದು ಕುಟುಂಬ) – ಕೃಣ್ವಂತೋ ವಿಶ್ವಮಾಯರ್ಂ (ಇಡೀ ಜಗತ್ತನ್ನು ನಾವು ಶ್ರೇಷ್ಠಗೊಳಿಸುತ್ತೇವೆ) – ಸರ್ವೇ ಜನಾಃ ಸುಖಿನೋ ಭವಂತು (ಎಲ್ಲರೂ ಸಂತೋಷವಾಗಿರಬೇಕು) – ಜನನಿ ಜನ್ಮಭೂಮಿ ಸ್ವರ್ಗಾದಪಿ ಗರೀಯಸಿ (ತಾಯಿ ಮತ್ತು ಮಾತೃಭೂಮಿ ಸ್ವರ್ಗಕ್ಕಿಂತ ಶ್ರೇಷ್ಠ) ಎಂಬ ಸಂದೇಶಗಳು ಇಂದಿಗೂ ಪ್ರಸ್ತುತ. ಪ್ರಜಾಪ್ರಭುತ್ವದ ವಿಶ್ವದ ಅತಿದೊಡ್ಡ ದೇವಾಲಯವಾದ ಸಂಸತ್ತಿನ ಭವನದ ಮುಖ್ಯ ದ್ವಾರದ ಮೇಲಿನ ಸಂಸ್ಕೃತದಲ್ಲಿನ ಉಲ್ಲೇಖವು ನಮಗೆ ರಾಷ್ಟ್ರದ ಸಾರ್ವಭೌಮತ್ವವನ್ನು ನೆನಪಿಸುತ್ತದೆ. ಸಂಸತ್ ಭವನದಲ್ಲಿ ಅನೇಕ ಸಂಸ್ಕೃತ ಉಲ್ಲೇಖಗಳನ್ನು ಕೆತ್ತಲಾಗಿದೆ, ಅವುಗಳು ಎರಡೂ ಸದನಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿ ಮತ್ತು ಮಾರ್ಗದರ್ಶನ ನೀಡುತ್ತವೆ ಎಂದು ಮಾಹಿತಿ ನೀಡಿದರು.

ನಾಸಾದ ಪ್ರಸಿದ್ಧ ವಿಜ್ಞಾನಿ ರಿಕ್ ಬ್ರಿಗ್ಸ್ ಅವರು ಸಂಸ್ಕøತ ಭಾμÉಯ ಹಿರಿಮೆಯನ್ನು ಸ್ಪಷ್ಟಪಡಿಸಿದ್ದಾರೆ, ಅವರು ಸಂಸ್ಕೃತ ವ್ಯಾಕರಣದ ಉದಾಹರಣೆಗಳನ್ನು ನೀಡುವ ಮೂಲಕ ತಮ್ಮ ಹಕ್ಕುಗಳನ್ನು ದೃಢಪಡಿಸಿದ್ದಾರೆ. ಈ ಭಾμÉಯ ವೈಜ್ಞಾನಿಕತೆಯನ್ನು ಅಧ್ಯಯನ ಮಾಡಿದ ನಂತರ, ಸಂಶೋಧನಾ ಸಂಸ್ಥೆ ಓಂSಂ ಕಂಪ್ಯೂಟರ್ ಸಾಫ್ಟ್‍ವೇರ್‍ಗೆ ಸಂಸ್ಕೃತವನ್ನು ಅತ್ಯಂತ ಸೂಕ್ತವಾದ ಭಾμÉ ಎಂದು ಪರಿಗಣಿಸಿದೆ.

60 ಸಾವಿರಕ್ಕೂ ಹೆಚ್ಚು ಸಂಸ್ಕøತ ಹಸ್ತಪ್ರತಿಗಳ ಸಂಶೋಧನೆಗಾಗಿ ನಾಸಾದಲ್ಲಿ ಪ್ರತ್ಯೇಕ ವಿಭಾಗವನ್ನು ರಚಿಸಲಾಗಿದೆ. ಅಮೆರಿಕ, ಜರ್ಮನಿ ಮೊದಲಾದ ಹಲವು ದೇಶಗಳು ಸಂಸ್ಕøತ ಕ್ಷೇತ್ರದಲ್ಲಿ ಅತ್ಯುತ್ತಮ ಸಂಶೋಧನಾ ಕಾರ್ಯವನ್ನು ನಿರಂತರವಾಗಿ ಮಾಡುತ್ತಿವೆ ಎಂದು ಅವರು ತಿಳಿಸಿದರು.

ಆಡು ಭಾμÉಗಳಲ್ಲಿ ಸಂಸ್ಕøತವನ್ನು ಭಾರತದ ಸಂವಿಧಾನದ ಎಂಟನೇ ಶೆಡ್ಯೂಲ್‍ನಲ್ಲಿ ಸೇರಿಸಲಾಗಿದೆ, ಆದರೆ ಉತ್ತರಾಖಂಡ ರಾಜ್ಯದಲ್ಲಿ ಇದು ಎರಡನೇ ಅಧಿಕೃತ ಭಾμÉಯ ಸ್ಥಾನಮಾನವನ್ನು ಹೊಂದಿದೆ. ಕರ್ನಾಟಕದ ಮುತ್ತೂರಿನಲ್ಲಿ ಸಂಸ್ಕøತವು ಮಾತನಾಡುವ ಭಾμÉಯಾಗಿದೆ. ಇದಲ್ಲದೆ, ಸಂಸ್ಕೃತವನ್ನು ದೇಶದ ಅನೇಕ ಭಾಗಗಳಲ್ಲಿ ಸಾಮಾನ್ಯವಾಗಿ ಮಾತನಾಡುವ ಭಾμÉಯಾಗಿ ಬಳಸಲಾಗುತ್ತದೆ. ದೇಶ ಮತ್ತು ಪ್ರಪಂಚದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕøತ ಭಾμÉಯನ್ನು ಕಲಿಸಲಾಗುತ್ತದೆ. ಈ ಭಾμÉಯ ಜ್ಞಾನ ಹೊಂದಿರುವವರ ಭವಿಷ್ಯವು ತುಂಬಾ ಉಜ್ವಲವಾಗಲಿದೆ ಎಂದು ಹೇಳಿದರು.

ಸಂಸ್ಕøತ ಶಿಕ್ಷಣದಲ್ಲಿ ಏಕರೂಪತೆಯನ್ನು ತರುವುದು, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸಂಸ್ಕೃತವನ್ನು ಅಧ್ಯಯನ ಮಾಡಲು ಅವಕಾಶಗಳನ್ನು ಒದಗಿಸುವುದು ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಸ್ಕøತ ಸಂಶೋಧನೆಯ ಗುಣಮಟ್ಟವನ್ನು ಹೆಚ್ಚಿಸುವುದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಘಟಿಕೋತ್ಸವದಲ್ಲಿ ಧರ್ಮ ಮತ್ತು ಸಂಸ್ಕೃತಿಯ ಪ್ರಚಾರ ಮತ್ತು ಸಂರಕ್ಷಣೆಗಾಗಿ ಮತ್ತು ಸಮಾಜ ಮತ್ತು ದೇಶದ ಕಲ್ಯಾಣಕ್ಕೆ ಅವರ ಅತ್ಯುತ್ತಮ ಕೊಡುಗೆಗಾಗಿ ಸಾಧಕರಿಗೆ ಗೌರವ ಪದವಿಯನ್ನು ನೀಡಲಾಗಿದೆ. ಈ ಸಾಧಕರ ಸೇವೆ ನಿರಂತರವಾಗಿರಲಿ ಎಂದು ಆಶಿಸುತ್ತೇನೆ ಹಾಗೂ ಈ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಪ್ರತಿಯೊಬ್ಬರು ಸನ್ಮಾರ್ಗದಲ್ಲಿ ತಮ್ಮ ಜ್ಞಾನವನ್ನು ದೇಶದೆಲ್ಲೆಡೆ ಪಸರಿಸಿ ಹಾಗೂ ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವರಾದ ಸನ್ಮಾನ್ಯ ಡಾ.ಎಂ.ಸಿ. ಸುಧಾಕರ್, ಘಟಿಕೋತ್ಸವದ ಮುಖ್ಯ ಅತಿಥಿ ಪೆÇ್ರ. ಎಚ್.ವಿ ನಾಗರಾಜ ರಾವ್, ಕುಲಪತಿ ಡಾ. ಅಹಲ್ಯಾ ಶರ್ಮಾ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here