ಕಲಬುರಗಿ: ಆದಿಜಾಂಬವ ಸರ್ಕಾರಿ ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ನಿಯೋಗ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಕರ್ನಾಟಕ ರಾಜ್ಯ ನಿಗಮ ಮಂಡಳಿಗೆ ಕಾಂಗ್ರೆಸ್ ಪಕ್ಷದ ಹಿರಿಯ ಧುರಿಣರಾದ ಶ್ಯಾಮರಾವ ನಾಟಿಕಾರ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಮಚಂದ್ರ ಕಾರಬೋಸಗಾ, ಘಾಳಪ್ಪ ಗೋಕಲೆ, ಧರ್ಮಣ್ಣ ನಾಟಿಕಾರ, ಬಸಣ್ಣಾ ಮಾಳಗಿ, ಎಂ.ಟಿ.ಕಟ್ಟಿಮನಿ, ಕಂಟೆಪ್ಪ ಹುಲೆಪ್ಪಾ, ಮಲ್ಲಿಕಾರ್ಜುನ ಬೆಳಕೋಟಾ, ಅನೀಲಕುಮಾರ ಪುಂಡಲಿಕಪ್ಪಾ, ಸಾಯಿಬಣ್ಣಾ ಹೊಸಹಳ್ಳಿ, ಜಗನ್ನಾಥ ಯಲ್ಲಪ್ಪಾ, ಅನೀಲಕುಮಾರ ಗೋಖಲೆ ಇದ್ದರು.