ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ ಕಾರ್ಯಾಕಾರಣಿ ಸದಸ್ಯ ಸ್ಥಾನಕ್ಕೆ ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿವರಾಜ ಅಂಡಗಿ, ಶರಣರಾಜ ಚಪ್ಪರಬಂದಿ ಹಾಗೂ ವಿಜಯಕುಮಾರ ಪಾಟೀಲ್, ವಿಜಯಕುಮಾರ ಕಾಳೆ ಸಂತೋಷ ಕುಡಳ್ಳಿ , ಚಂದ್ರಕಾಂತ ಚಪ್ಪರಬಂದಿ, ತರುಣ ಶೇಖರ ಬಿರಾದಾರ, ಕರಣ ಕುಮಾರ ಅಂದೋಲಾ, ಯುವ ಸಮಾಜ ಸೇವಕರಾದ ಪ್ಯಾಟಿ ಶಶಿಧರ, ಸಂತೋಷ ಪ್ಯಾಟಿ ನಾಮಪತ್ರ ಸಲ್ಲಿಕೆಗೆ ಬೆಂಬಲ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿವಿಧ ಸ್ಥಾನಗಳಲ್ಲಿ ಸೇವೆ ಸಲ್ಲಿಸುವ ಇಚ್ಛೆ ಹೊಂದಿದ್ದಾರೆ ಹಾಗೂ ಸಮಾಜ ಸೇವೆಯಲ್ಲಿ ಆದರ್ಶರಾದ ಲಿಂಗೈಕ್ಯ ನ್ಯಾಯವಾದಿ ಫ. ಗು.ಹಳಕಟ್ಟಿ ಯವರನ್ನು ಅನುಕರಿಸುವ ಮೂಲಕ ಅವರಂತೆ ವೀರಶೈವ ಮಹಾಸಭಾಕ್ಕೆ ಸೇವೆ ಸಲ್ಲಿಸುವ ಇಚ್ಛೆ ಹೊಂದಿ ಚುನಾವಣಾ ಕಣದಲ್ಲಿ ಭಾಗವಹಿಸಿದ್ದೇನೆ ಎಂದು ತಿಳಿಸಿದ್ದಾರೆ.