ಸುರಪುರ ತಾಲ್ಲೂಕಿನ ಕರಿಬಾವಿಯಲ್ಲಿ ಮತಯಂತ್ರ ಧ್ವಂಸ ಓರ್ವನ ಬಂಧನ

0
1933

ಸುರಪುರ: ರಾಯಚೂರು ಲೋಕಸಭಾ ಚುನಾವಣೆ ಅಂಗವಾಗಿ ನಡೆದ ಸುರಪುರ ತಾಲ್ಲೂಕಿನ ಕರಿಬಾವಿ ಗ್ರಮದಲ್ಲಿನ ಮತಗಟ್ಟೆ ಸಂಖ್ಯೆ 21ರಲ್ಲಿನ ಮತಯಂತ್ರ ಧ್ವಂಸಗೊಳಿಸಿದ ಘಟನೆ ನಡೆದಿದೆ.

ಬೆಳಿಗ್ಗೆಯಿಂದ ಶಾಂತಿಯುತವಾಗಿ ಮತದಾನ ಆರಂಭಗೊಂಡಿತ್ತಾದರೂ ಮದ್ಹ್ಯಾನದ ವೇಳೆಗೆ ಬಿಜೆಪಿ ಮುಖಂಡರು ಮತದಾನ ಕೇಂದ್ರದಲ್ಲಿ ಅಕ್ರಮ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮತಯಂತ್ರವನ್ನು ಧ್ವಂಸಗೊಳಿಸಿದ್ದಾಗಿ ಹೇಳಿದ್ದಾನೆಂದು ತಿಳಿದು ಬಂದಿದೆ.

Contact Your\'s Advertisement; 9902492681

ಮತಯಂತ್ರ ಧ್ವಂಸಗೊಳಿಸಿದ ವ್ಯಕ್ತಿ ಗುರುನಾಥಗೌಡ ತಂ. ಜಗದೇವಪ್ಪಗೌಡ ಪೊಲೀಸ್ ಪಾಟೀಲ (೪೦ ವರ್ಷ) ಎಂದು ತಿಳಿದು ಬಂದಿದ್ದು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here