Thursday, August 8, 2024
ಮನೆಬಿಸಿ ಬಿಸಿ ಸುದ್ದಿಸಕ್ಷಮ ಉತ್ತರ ಕರ್ನಾಟಕ ಪ್ರಾಂತ ಪಧಾದಿಕಾರಿಗಳ ಆಯ್ಕೆ

ಸಕ್ಷಮ ಉತ್ತರ ಕರ್ನಾಟಕ ಪ್ರಾಂತ ಪಧಾದಿಕಾರಿಗಳ ಆಯ್ಕೆ

ಕಲಬುರಗಿ: ವಿಶೇಷಚೇತನರ ಕಲ್ಯಾಣಕ್ಕಾಗಿ ಸಮರ್ಪಿತ ರಾಷ್ಟ್ರೀಯ ಸಂಘಟನೆ ಸಮದೃಷ್ಟಿ ಕ್ಷಮತಾವಿಕಾಸ ಮತ್ತು ಅನುಸಂಧಾನ ಮಂಡಲ (ಸಕ್ಷಮ) ಉತ್ತರ ಕರ್ನಾಟಕ ಪ್ರಾಂತದ ಕಾರ್ಯಕಾರಿ ಸಮಿತಿ ಸಭೆ ಶುಕ್ರವಾರ ಹುಬ್ಬಳ್ಳಿಯಲ್ಲಿ ಜರುಗಿತು.

ಉತ್ತರ ಕರ್ನಾಟಕ ಪ್ರಾಂತದ ನೂತನ ಅಧ್ಯಕ್ಷರನ್ನಾಗಿ ಡಾ. ಸುನಿಲ ಗೋಖಲೆ ಅವರನ್ನು ಆಯ್ಕೆ ಮಾಡಲಾಯಿತು.ಇದುವರೆಗೆ ಎಸ್.ಬಿ ಶೆಟ್ಟಿ ಪ್ರಾಂತ ಅಧ್ಯಕ್ಷರಾಗಿದ್ದರು. ಇದೇ ಸಂದರ್ಭದಲ್ಲಿ ಖಾಲಿಯಾದ ಪ್ರಾಂತ ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜ ಹೆಳವರ ಯಾಳಗಿ ಮತ್ತು ಡಾ. ವಿಜಯ ವಿಠ್ಠಲ ಮನಗೂಳಿ ಅವರಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಖಜಾಂಚಿಯಾಗಿ ಮಹೇಶ ಗದಗ ಅವರನ್ನು ನೇಮಿಸಲಾಯಿತು ಎಂದು ಸಕ್ಷಮ ಪ್ರಾಂತ ಕಾರ್ಯದರ್ಶಿ ಡಾ. ಸುಭಾಷ ಬಬ್ರುವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular


Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420