ರೈತರ, ವಿದ್ಯಾರ್ಥಿಗಳ ಸಮಸ್ಯ ಪರಿಹಾರಕ್ಕೆ ಒತ್ತಾಯ: ಶರಣಬಸಪ್ಪ ದೊಡ್ಮನಿ

0
28

ಕಲಬುರಗಿ : ಬಡವರ ಪರವಾಗಿ ಹಾಗೂ ಶಾಲಾ ಕಾಲೇಜು ವಸತಿ ನಿಲಯಗಳಲ್ಲಿ ಆಗುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಸಮಾಜಕಲ್ಯಾಣ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿ, ಶೀಘ್ರವೇ ಪರಿಹಾರ ಸೂಚಿಸಲುಅಗ್ರಹ ಪಡಿಸಬೇಕೆಂದುರಾಷ್ಟ್ರೀಯ ಸಮಾಜ ಪಕ್ಷದರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಬಸಪ್ಪದೊಡ್ಮನಿ ಅವರು ಹೇಳಿದರು.

ಕಲಬುರಗಿ ಜಿಲ್ಲಾ ಕಚೇರಿಯಲ್ಲಿ ರಾಷ್ಟ್ರೀಯ ಸಮಾಜ ಪಕ್ಷದಜಿಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಪಕ್ಷವು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಫಲಿತಾಂಶದ ಕುರಿತು ಚೆರ್ಚೆಸಲಾಯಿತು.

Contact Your\'s Advertisement; 9902492681

ನಂತರ ಈ ಸಭೆಯಲ್ಲಿ ಮುಂಬರುವ ಜಿಲ್ಲಾ ಪಂಚಾಯತತಾಲೂಕ ಪಂಚಾಯತ ಚುನಾವಣೆಯ ಪೂರ್ವತಯಾರಿ ನಡೆಸಿ ಕಾರ್ಯಕರ್ತರಿಗೆ ತಾಲೂಕು, ಜಿಲ್ಲಾ ಪಂಚಾಯತ ಸ್ಥಾನಗಳ ಕ್ಷೇತ್ರಗಳ ಕುರಿತು ಮಾಹಿತಿ ನೀಡಲಾಯಿತು. ಹಿಂದೂಳಿದವರ ಬಡವರ ಸಮಸ್ಯೆಗಳು ಅರಿಯಲು ಗ್ರಾಮಗಳಿಗೆ ಭೇಟಿ ನೀಡಿ ಸಾಮಾಜಿಕಆರೋಗ್ಯ ಸುಧಾರಣೆಗೆ ಹೆಚ್ಚಿನಒತ್ತು ನೀಡುವಂತೆಕರೆ ಕೊಟ್ಟರು ಹಾಗೂ ಪಕ್ಷದ ಸಂಘಟನೆಗೆ ಜನರೊಂದಿಗೆ ಭೇಟಿ ಮಾಡಿಜನರ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸಲು ಪದಾಧಿಕಾರಿಗಳು/ ಕಾರ್ಯಕರ್ತರಿಗೆ ಕರೆಕೊಟ್ಟರು.

ಈ ಸಂದರ್ಭದಲ್ಲಿ ಆರ್.ಎಸ್.ಪಿ ರಾಷ್ಟ್ರೀಯ ಉಪಾಧ್ಯಕ್ಷ ಶಿವಲಿಂಗಪ್ಪ ಕಿನ್ನೂರ, ರಾಜ್ಯ ಕಾರ್ಯದರ್ಶಿ ಬಿ. ಎಂ. ರಾವುರ, ಜಿಲ್ಲಾಧ್ಯಕ್ಷ ದೇವೇಂದ್ರಪ್ಪ ಕ್ಯಾಶ್ಪಹಳ್ಳಿ, ಜಿಲ್ಲಾ ಕಾರ್ಯದರ್ಶಿ ಶ್ರೀಮಂತ ಮಾವನೂರ್, ಜೇವರ್ಗಿತಾಲೂಕ ಅಧ್ಯಕ್ಷ ಮಹಾಂತೇಶ ಅವರಾದಿ, ಶಹಬಾದ ತಾಲೂಕ ಅಧ್ಯಕ್ಷ ರಮೇಶ ಕೊಮ್ಮೇಶ್ವರ್ ಭೀಮರಾಯ ಕಟ್ಟಿಮನಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಜಯಕುಮಾರ್ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here