ವಾಡಿ: ಪಟ್ಟಣ ಸಮೀಪದ ಇಂಗಳಗಿ ಗ್ರಾಮದಲ್ಲಿ ಎಸಿಸಿ ಸಿಮೆಂಟ್ ಕಂಪನಿ ವತಿಯಿಂದ ಸುಮಾರು ರೂ.10 ಲಕ್ಷದ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಸಿಮೆಂಟ್ ರಸ್ತೆ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಣ್ಣಾರಾವ ಪಾಟೀಲ ಚಾಲನೆ ನೀಡಿದರು.
ಗ್ರಾಮದಿಂದ ಶಹಾಬಾದ್ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ಗ್ರಾಮದ ಮುಖ್ಯ ರಸ್ತೆ ಇದಾಗಿದೆ. ಈ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆ ಮೂಲಕವೇ ನೂರಾರು ಜನರ ದಿನನಿತ್ಯದ ಓಡಾಟವಾಗಿದೆ. ರಸ್ತೆ ನಿರ್ಮಾಣದಿಂದ ರೈತರು, ಶಾಲಾ ಮಕ್ಕಳು, ಕಾರ್ಮಿಕರಿಗೆ ಶಹಾಬಾದ್ ನಗರಕ್ಕೆ ಹೋಗುವುದಕ್ಕೆ ಅನುಕೂಲವಾಗಲಿದೆ. ಎಂದು ಗ್ರಾ.ಪಂ.ಸದಸ್ಯ ಕಾಶೀನಾಥ್ ಚನ್ನಗುಂಡ ತಿಳಿಸಿದ್ದಾರೆ.
ಗ್ರಾಮದ ಪಕ್ಕದಲ್ಲಿ ಹರಿಯುವ ಕಾಗಿಣ ನದಿಗೆ ಹೋಗುವ ರಸ್ತೆ ತುಂಬಾ ಹದಗೆಟ್ಟಿದೆ. ಕಾಗಿಣ ನದಿ ದಂಡೆಯಲ್ಲಿ ಪ್ರತಿ ವರ್ಷ ಹಲವು ಸಾಂಪ್ರದಾಯಿಕ ಆಚರಣೆಗೆ ಹೋಗುತ್ತಿರುವ ವಿವಿಧ ಧರ್ಮೀಯರಿಗೆ ಕಿರಿಕಿರಿ ಉಂಟಾಗಿದೆ. ಶೀಘ್ರದಲ್ಲೇ ರಸ್ತೆ ನಿರ್ಮಾಣ ಮಾಡುವಂತೆ ಎಸಿಸಿ ಸಿಮೆಂಟ್ ಕಂಪನಿ ಆಡಳಿತ ಮಂಡಳಿ ಗಮನಕ್ಕೆ ತರಲಾಗಿದೆ. ಕೂಡಲೇ ರಸ್ತೆ ನಿರ್ಮಾಣ ಮಾಡುವುದಾಗಿ ಕಂಪನಿ ತಿಳಿಸಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ಯಾಮೇರ್ ತಿಳಿಸಿದ್ದಾರೆ.
ಎಸಿಸಿ ಸಿಮೆಂಟ್ ಕಂಪನಿ ಬಿ.ಎನ್ ಶ್ರೀನಿವಾಸ್, ಮಹಾದೇವಪ್ಪ ಸಾಸನೂರ್, ಸಿಎಸ್ಆರ್ ವಿಭಾಗ ವ್ಯವಸ್ಥಾಪಕರಾದ ವಿರೇಶ ಎಮ್.ಯು. ಜಗದೀಶ, ಪಂಚಾಯಿತಿ ಸದಸ್ಯರಾದ ಶರಣು ರಾವೂರಕರ್, ಕಾಶಿನಾಥ ಚನ್ನಗುಂಡ, ಮುಖಂಡರಾದ ಮುಕ್ರುಮ ಪಟೇಲ, ಮಲ್ಲಪ್ಪ ನಾಟೀಕಾರ, ವೆಂಕಟಗೀರಿ ಕಟ್ಟಿಮನಿ, ಶಾಂತಪ್ಪ ಬರಗಲಚಾಳಿ, ಅಣ್ಣಾರಾವ ಅಳ್ಳೋಳಿ, ಮಾಳಿಗೆಪ್ಪ ಹಿಂದಿನಕೆರಿ, ಸಾಬಣ್ಣ ಪೂಜಾರಿ, ಮಲ್ಲಿಕಾರ್ಜುನ ಗುಡುಬಾ, ನಾಗಣ್ಣಸಾಹು ಯಾದಗಿರಿ ಇದ್ದರು.
ಇಂಗಳಗಿ- ಶಹಾಬಾದ್ ಮಧ್ಯೆ 2 ದಿನ ಸಂಪರ್ಕ ಕಡಿತ:
ಇಂಗಳಗಿ ಗ್ರಾಮದಲ್ಲಿ ರಸೆ ಕಾಮಗಾರಿ ಆರಂಭವಾದ ಪರಿಣಾಮ ಇಂಗಳಗಿ ಗ್ರಾಮದಿಂದ ಶಹಾಬಾದ್ ನಗರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆದ ರಸ್ತೆ ಜು.26,27 ರವರೆಗೆ ಬಂದ್ ಮಾಡಲಾಗಿದೆ. ಇದರಿಂದ ಶಹಾಬಾದ್, ಕಲಬುರಗಿ ನಗರಕ್ಕೆ ಹೋಗುವ ಪ್ರಯಾಣಿಕರು ರಾವೂರ ಗ್ರಾಮದ ಮೇಲೆ ಹಾದು ಹೋಗಬೇಕು ಎಂದು ಎಸಿಸಿ ಕಂಪನಿ ಸಿಎಸ್.ಆರ್ ವಿಭಾಗದ ಜಗದೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಮತ್ತು ವಸತಿ ಸಚಿವರಾದ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಅವರು ಗುರುವಾರ ಇಲ್ಲಿನ…
ಕಲಬುರಗಿ: ನೇತ್ರದಾನ ಮಹಾದಾನ, ಪ್ರತಿಯೊಬ್ಬರೂ ತಮ್ಮ ನೇತ್ರದಾನ ಮಾಡುವುದರೊಂದಿಗೆ ಅಂಧರ ಬಾಳಿಗೆ ಬೆಳಕಾಗಲು ಮುಂದೆ ಬರಬೇಕು ಎಂದು ಜಿಲ್ಲಾ ಪಂಚಾಯತ್…
ಕಲಬುರಗಿ: ದಿ.ಲಿಂಗರಾಜ ಶಾಸ್ತ್ರಿ ಅವರದು ಬಹುಮುಖ ವ್ಯಕ್ತಿತ್ವ ಎಂದು ಜೆಡಿಎಸ್ ಮುಖಂಡ ನಾಸೀರ್ ಹುಸೇನ್ ಅಭಿಮತ ವ್ಯಕ್ತಪಡಿಸಿದರು. ನಗರದ ಕನ್ನಡ…
ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ನಕಲಿ ವೈದ್ಯರ ವಹಾವಳಿ ತಡೆಯಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಯುವ ಕರ್ನಾಟಕ ವೇದಿಕೆ ಚಿಂಚೋಳಿ ಮತ್ತು…
ಸುರಪುರ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸುರಪುರ ತಾಲೂಕ ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ಬಸವರಾಜ ಎಸ್.ಶೆಳ್ಳಗಿ ಅವರನ್ನು ನೇಮಕಗೊಳಿಸಲಾಗಿದೆ. ಈ…
ಸುರಪುರು: ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯಾದಗಿರಿಯವರ ಸಂಯೋಗದಲ್ಲಿ “ವಿಶ್ವ ಓಜೋನ್ ದಿನ”…