ಮಹಾರಾಷ್ರ್ಟ ವಿಧಾನಸಭೆಗೆ ಕೆಲವರಿಗೆ ಟಿಕೆಟ್ ಕೈತಪ್ಪಲು ನಾನು ಕಾರಣ ಅಲ್ಲ: ಖರ್ಗೆ

0
173

ಕಲಬುರಗಿ: ಮಹಾರಾಷ್ರ್ಟ ವಿಧಾನಸಭೆಗೆ ಕೆಲವರಿಗೆ ಟಿಕೆಟ್ ಕೈತಪ್ಪಲು ನಾನು ಕಾರಣ ಅಲ್ಲ ಎಐಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನಗರದಲ್ಲಿ ಮಾತನಾಡಿದ ಅವರುˌ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ಅನೇಕ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡ ಹಿನ್ನಲೆಯಲ್ಲಿ ಕೆಲವರಿಗೆ ಟಿಕೆಟ್ ಸಿಕ್ಕಿಲ್ಲ. ಆದರೆ ಸೂಕ್ತ ಅಭ್ಯರ್ಥಿಗಳನ್ನು ಹುಡುಕಿ ಟಿಕೆಟ್ ನೀಡಲಾಗಿದೆ. ಟಿಕೆಟ್ ಸಿಗದವರು ತಮಗೆ ಟಿಕೆಟ್ ತಪ್ಪಲು ಖರ್ಗೆ ಕಾರಣ ಎನ್ನುತ್ತಿದ್ದಾರೆ.

Contact Your\'s Advertisement; 9902492681

ನನ್ನ ಉಸ್ತುವಾರಿ ಬಗ್ಗೆಯೂ ಅಸಮಾದಾನ ವ್ಯಕ್ತಪಡಿಸಿದ್ದಾರೆ‌. ಆದರೆ ನಾನೇ ಟಿಕೆಟ್ ತಪ್ಪಿಸಿದ್ದು ಅನ್ನೋದು ಸರಿಯಲ್ಲ. ಟಿಕೆಟ್ ಬಗ್ಗೆ ಕಮಿಟಿ ನಿರ್ಧಾರ ತಗೆದುಕೊಳ್ಳುತ್ತೆ ವಿನಃ ಯಾವುದೇ ಒಬ್ಬ ವ್ಯಕ್ತಿ ತೆಗೆದುಕೊಳ್ಳೋದಿಲ್ಲ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here