ಕಲ್ಯಾಣಕರ್ನಾಟಕ ಸೇನೆಯ ಜಿಲ್ಲಾ ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ

0
20

ಕಲಬುರಗಿ: ಕಲ್ಯಾಣ ಕರ್ನಾಟಕ ಸೇನೆಯ ರಾಜ್ಯ ಸಂಸ್ಥಾಪಕ ಅಧ್ಯಕ್ಷ ದತ್ತು ಹಯ್ಯಾಳಕರ್, ರಾಜ್ಯ ಗೌರವಾಧ್ಯಕ್ಷ ರಮೆಶ ಬೀದರ್‍ಕರ ಹಾಗೂ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಮಹಿಳಾ ಘಟಕ ನೇಮಕ ಮಾಡಲಾಯಿತು.

(ಶ್ರೀಮತಿ ಗೋರಂಪಳ್ಳಿ ಅಧ್ಯಕ್ಷೆ), (ನೀಲಮ್ಮ ಕಮಲಾಪೂರಕರ ಉಪಾಧ್ಯಕ್ಷೆ), (ಶ್ರೀದೇವಿ ಮುತ್ತಂಗಿ ಪ್ರಧಾನಕಾರ್ಯದರ್ಶಿ), (ಸುಜಾತಾ ಸಹ ಕಾರ್ಯದರ್ಶಿ), (ಸಾವಿತ್ರಿ ಸಂಘಟನಾ ಕಾರ್ಯದರ್ಶಿ) ನೇಮಕ ಮಾಡಲಾಯಿತು.

Contact Your\'s Advertisement; 9902492681

ಈ ಕಾರ್ಯಕ್ರಮದಲ್ಲಿ ದತ್ತು ಹಯ್ಯಾಳಕರ್ ಮಾತನಾಡಿದ ಸಂಘಟನೆ ಬೆಳೆಯ ಬೇಕಾದರೆ ಸ್ತ್ರೀ ಶಕ್ತಿ ಅತಿ ಅವಶ್ಯಕ, ಸ್ತ್ರೀಯರ ವಿರುದ್ಧ ನಡೆಯುತ್ತಿರುವ ಶೋಷಣೆ, ಅತ್ಯಾಚಾರ ಮುಂತಾದವುಗಳನ್ನು ಮೆಟ್ಟಿ ನಿಂತು ಹೋರಾಡಬೇಕಿದೆ. ಅದಕ್ಕೆ ಸ್ತ್ರೀಯರು ಮುಂದೆ ಬರಬೇಕಾಗಿದೆ. ಗ್ರಾಮ ಮಟ್ಟ ದಿಂದ ಹಿಡಿದು ಕೊಂಡು ರಾಜ್ಯಮಟ್ಟದವರೆಗೆ ಮಹಿಳೆಯರು ಶಸಕ್ತವಾಗಿ ನಿಲ್ಲಬೇಕಿದೆ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಹಿಳೆಯರ, ಶೋಷಿತರ, ದಮನಿತರ ಬೆಂಬಲವಾಗಿ ನಾವು ಸದಾ ಇರುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ರವೀಂದ್ರ ಟಿ. ವರ್ಮಾ, ಕಾಶೀನಾಥ, ಮುಖಂಡರಾದ ಗುಂಡೇಶ ಶಿವನೂರ, ಮೌನೇಶ ಹಯ್ಯಾಳಕರ್ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here