ಕಲಬುರಗಿ: ಎಲ್ಲಾ ಜಾತಿಯನ್ನು ಗೌರವಿಸು, ನಿನ್ನ ಜಾತಿಯನ್ನು ಆರಾಧಿಸು ಎಂಬ ಭಾವನೆಯೊಂದಿಗೆ ಕೊಪ್ಪಳ ಜಿಲ್ಲಾ ಗಾಣಿಗ ಸಮಾಜ, ಡಾ.ಚೌಧರಿ ಮತ್ತು ಡಾ. ಕಾಬಾ ವಧುವರರ ವೇದಿಕೆಯಲ್ಲಿ 2 ನೇ ಅಂತರ ರಾಜ್ಯ ವಧುವರರ ಸಮಾವೇಶ ಸೆ.15 ರಂದು ಹಮ್ಮಿಕೊಳ್ಳಲಾಗಿದೆ ಎಂದು ಬಿ.ಎಂ.ಪಾಟೀಲ ಕಲ್ಲೂರ ತಿಳಿಸಿದ್ದಾರೆ.
ಸೆ.15ರಂದು ಬೆಳಿಗ್ಗೆ 9.ಗಂ 30 ನಿ. ಮಧುಶ್ರೀ ಗಾರ್ಡನ್ ಕೊಪ್ಪಳದಲ್ಲಿ ನಡೆಯಲಿದೆ ಹಾಗೂ ಕಲಬುರಗಿ ಜಿಲ್ಲಾ ಗಾಣಿಗ ನೌಕರರ ಕಲ್ಯಾಣ ಸಂಘ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಬೆಳಿಗ್ಗೆ 10 ಗಂಟೆ 30 ನಿ. ಕಲಬುರಗಿ ನಗರದ ಕೆ.ಇ.ಬಿ.ಸಭಾ ಭವನದಲ್ಲಿ ನಡೆಯಲಿದೆ.
ಸಮಾಜದ ಗುರು ಹಿರಿಯರು, ಯುವಕರು, ಅಭಿಮಾನಿಗಳು, ಸಮಾಜದ ಬಂಧುಗಳು, ಸಮಾವೇಶ ಹಾಗೂ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಕಲ್ಲೂರ ಮನವಿ ಮಾಡಿದ್ದಾರೆ.