ಚನ್ನಮಲ್ಲಿಕಾರ್ಜುನನಿಗೆ ಮನವ ಮಾರಿದ ಅಕ್ಕಮಿಹಾದೇವಿ

0
28

ಕಲಬುರಗಿ: ೧೨ನೇ ಶತಮಾನದ ಬಸವಾದಿ ಶರಣರು ರಚಿಸಿದ ಅನುಭಾವದ ನುಡಿಗಳಾದ ವಚನಗಳಿಗೆ ಅದರದ್ದೇ ಆದ ವಿಶಿಷ್ಟತೆ ಮತ್ತು ಮಹತ್ವವಿದೆ. ಮಾತುಕೊಟ್ಟಂತಿರುವ, ಪ್ರಮಾಣ ಮಾಡಿದಂತಿರುವ ಈ ವಚನಗಳನ್ನು ನಿರ್ವಚನ ಮಾಡುವುದು ಎಂದರೆ ಕುರುಡನೊಬ್ಬ ಆನೆಯನ್ನು ವರ್ಣಿಸಿದಂತಾಗುತ್ತದೆ ಎಂದು ಶರಣ ಚಿಂತಕಿ ಸಾಕ್ಷಿ ಎಸ್. ಸತ್ಯಂಪೇಟೆ ಅಭಿಪ್ರಾಯಪಟ್ಟರು.

ಡಾ. ಬಿ.ಡಿ.‌ಜತ್ತಿ ವಚನ ಅಧ್ಯಯನ ಹಾಗೂ ಸಂಶೋಧನ ಕೇಂದ್ರ ಹಾಗೂ ಬಸವ ಸಮಿತಿ ಸಹಯೋಗದಲ್ಲಿ ಮಹಾದೇವಿಯಕ್ಕಗಳ ಸಮ್ಮೇಳನ- 14 ವಚನ ನಿರ್ವಚನ ಗೋಷ್ಠಿ-1 ರಲ್ಲಿ “ಬಸವಣ್ಣ ನಿಮ್ಮ ಅಂಗದಾಚಾರವ ಕಂಡು” ಅಕ್ಕನ ವಚನ ನಿರ್ವಚನ ಮಾಡಿದ ಅವರು, ಕರ್ನಾಟಕ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಬಸವಣ್ಣನವರ ಕತೃತ್ವ ಶಕ್ತಿ ಏನು? ಎಂಥದು? ಎಂಬುದನ್ನು ಅರಿಯುವುದು ಬಹಳ ಅಗತ್ಯವಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಬಸವಣ್ಣನವರು ತಾವೊಬ್ಬರೇ ದಾರ್ಶನಿಕರಾಗಲಿಲ್ಲ. ತಮ್ಮ ಸಂಪರ್ಕಕ್ಕೆ ಬಂದ ಎಲ್ಲರನ್ನು ಆ ಎತ್ತರಕ್ಕೆ ಬೆಳೆಸಿದ ಕೀರ್ತಿವಂತರು ಎಂದು ಹೇಳಿದರು.

ಬದುಕಿನಲ್ಲಿ ಅದು ಬೇಕು ಇದು ಬೇಕು, ಅದನ್ನು ತನ್ನದಾಗಿಸಿಕೊಳ್ಳಬೇಕು ಎಂಬ ವಯಸ್ಸಿನಲ್ಲೇ ಅದು ತನಗೆ ಬೇಡ, ಅದನ್ನು ತೆಗೆದುಕೊಂಡು ನಾನೇನು ಮಾಡಲಿ ಎಂಬ ಉನ್ನತ ಸ್ಥಿತಿ ತಲುಪಿ, ಹಸಿವೆ ನೀನು ನಿಲ್ಲು, ತೃಷೆಯೇ ನೀನು ನಿಲ್ಲು, ಕಾಮವೇ ನೀನು ನಿಲ್ಲು ಎಂದು ಹೊರಟ ಅಕ್ಕಮಹಾದೇವಿ ಆಸೆ ತೊರೆದು, ರೋಷ ಬಿಚ್ಚಿಟ್ಟು ಚನ್ನಮಲ್ಲಿಕಾರ್ಜುನನಿಗೆ ಮನವ ಮಾರಿದವಳು.

ಚನ್ನಮಲ್ಲಿಕಾರ್ಜುನನೆಂಬ ತನ್ನ ಮನದ ನಲ್ಲನನ್ನು ಹುಡುಕುವ ದಾರಿಯಲ್ಲಿ ಬಸವನೆಂಬ ಬಳ್ಳಿಯನ್ನು ಕಾಲಿಗೆ ತಾಗಿಸಿಕೊಂಡು ಶರಣರ ಅನುಭವ ಮಂಟಪದಲ್ಲಿ ಮಾಗಿ ಉರಿಯುಂಡ ಕರ್ಪುರವಾಗಿ ಬೆಳಗಿದವಳು ಎಂದು ಹೇಳಿದರು.

“ಅರಸಿ ತೊಳಲಿದಡಿಲ್ಲ, ಹರಸಿ ಬಳಲಿದಡಿಲ್ಲ” ವಚನ ಕುರಿತು ಸುಮಂಗಲಾ ಬಾಳಿ, “ಅಂಗದಲ್ಲಿ ಆಚಾರವ ತೋರಿದ” ವಚನ ಕುರಿತು ಛಾಯಾ ಪಟ್ಟಣಶೆಟ್ಟಿ, ” ದೇವಲೋಕದವರಿಗೂ ಬಸವಣ್ಣನೆ ದೇವರು” ಎಂಬ ವಚನ ಕುರಿತು ನಿರ್ವಚನ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here