ಚನ್ನಮಲ್ಲಿಕಾರ್ಜುನನಿಗೆ ಮನವ ಮಾರಿದ ಅಕ್ಕಮಿಹಾದೇವಿ

ಕಲಬುರಗಿ: ೧೨ನೇ ಶತಮಾನದ ಬಸವಾದಿ ಶರಣರು ರಚಿಸಿದ ಅನುಭಾವದ ನುಡಿಗಳಾದ ವಚನಗಳಿಗೆ ಅದರದ್ದೇ ಆದ ವಿಶಿಷ್ಟತೆ ಮತ್ತು ಮಹತ್ವವಿದೆ. ಮಾತುಕೊಟ್ಟಂತಿರುವ, ಪ್ರಮಾಣ ಮಾಡಿದಂತಿರುವ ಈ ವಚನಗಳನ್ನು ನಿರ್ವಚನ ಮಾಡುವುದು ಎಂದರೆ ಕುರುಡನೊಬ್ಬ ಆನೆಯನ್ನು ವರ್ಣಿಸಿದಂತಾಗುತ್ತದೆ ಎಂದು ಶರಣ ಚಿಂತಕಿ ಸಾಕ್ಷಿ ಎಸ್. ಸತ್ಯಂಪೇಟೆ ಅಭಿಪ್ರಾಯಪಟ್ಟರು.

ಡಾ. ಬಿ.ಡಿ.‌ಜತ್ತಿ ವಚನ ಅಧ್ಯಯನ ಹಾಗೂ ಸಂಶೋಧನ ಕೇಂದ್ರ ಹಾಗೂ ಬಸವ ಸಮಿತಿ ಸಹಯೋಗದಲ್ಲಿ ಮಹಾದೇವಿಯಕ್ಕಗಳ ಸಮ್ಮೇಳನ- 14 ವಚನ ನಿರ್ವಚನ ಗೋಷ್ಠಿ-1 ರಲ್ಲಿ “ಬಸವಣ್ಣ ನಿಮ್ಮ ಅಂಗದಾಚಾರವ ಕಂಡು” ಅಕ್ಕನ ವಚನ ನಿರ್ವಚನ ಮಾಡಿದ ಅವರು, ಕರ್ನಾಟಕ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಬಸವಣ್ಣನವರ ಕತೃತ್ವ ಶಕ್ತಿ ಏನು? ಎಂಥದು? ಎಂಬುದನ್ನು ಅರಿಯುವುದು ಬಹಳ ಅಗತ್ಯವಾಗಿದೆ ಎಂದು ತಿಳಿಸಿದರು.

ಬಸವಣ್ಣನವರು ತಾವೊಬ್ಬರೇ ದಾರ್ಶನಿಕರಾಗಲಿಲ್ಲ. ತಮ್ಮ ಸಂಪರ್ಕಕ್ಕೆ ಬಂದ ಎಲ್ಲರನ್ನು ಆ ಎತ್ತರಕ್ಕೆ ಬೆಳೆಸಿದ ಕೀರ್ತಿವಂತರು ಎಂದು ಹೇಳಿದರು.

ಬದುಕಿನಲ್ಲಿ ಅದು ಬೇಕು ಇದು ಬೇಕು, ಅದನ್ನು ತನ್ನದಾಗಿಸಿಕೊಳ್ಳಬೇಕು ಎಂಬ ವಯಸ್ಸಿನಲ್ಲೇ ಅದು ತನಗೆ ಬೇಡ, ಅದನ್ನು ತೆಗೆದುಕೊಂಡು ನಾನೇನು ಮಾಡಲಿ ಎಂಬ ಉನ್ನತ ಸ್ಥಿತಿ ತಲುಪಿ, ಹಸಿವೆ ನೀನು ನಿಲ್ಲು, ತೃಷೆಯೇ ನೀನು ನಿಲ್ಲು, ಕಾಮವೇ ನೀನು ನಿಲ್ಲು ಎಂದು ಹೊರಟ ಅಕ್ಕಮಹಾದೇವಿ ಆಸೆ ತೊರೆದು, ರೋಷ ಬಿಚ್ಚಿಟ್ಟು ಚನ್ನಮಲ್ಲಿಕಾರ್ಜುನನಿಗೆ ಮನವ ಮಾರಿದವಳು.

ಚನ್ನಮಲ್ಲಿಕಾರ್ಜುನನೆಂಬ ತನ್ನ ಮನದ ನಲ್ಲನನ್ನು ಹುಡುಕುವ ದಾರಿಯಲ್ಲಿ ಬಸವನೆಂಬ ಬಳ್ಳಿಯನ್ನು ಕಾಲಿಗೆ ತಾಗಿಸಿಕೊಂಡು ಶರಣರ ಅನುಭವ ಮಂಟಪದಲ್ಲಿ ಮಾಗಿ ಉರಿಯುಂಡ ಕರ್ಪುರವಾಗಿ ಬೆಳಗಿದವಳು ಎಂದು ಹೇಳಿದರು.

“ಅರಸಿ ತೊಳಲಿದಡಿಲ್ಲ, ಹರಸಿ ಬಳಲಿದಡಿಲ್ಲ” ವಚನ ಕುರಿತು ಸುಮಂಗಲಾ ಬಾಳಿ, “ಅಂಗದಲ್ಲಿ ಆಚಾರವ ತೋರಿದ” ವಚನ ಕುರಿತು ಛಾಯಾ ಪಟ್ಟಣಶೆಟ್ಟಿ, ” ದೇವಲೋಕದವರಿಗೂ ಬಸವಣ್ಣನೆ ದೇವರು” ಎಂಬ ವಚನ ಕುರಿತು ನಿರ್ವಚನ ಮಾಡಿದರು.

emedialine

Recent Posts

`ಕಾವ್ಯ ಸಂಸ್ಕøತಿ ಯಾನ’ ಅಧ್ಯಕ್ಷರಾಗಿ ಕವಿ ಅಂಬಲಗೆ ಆಯ್ಕೆ

ಕಲಬುರಗಿ: ಕಲಬುರಗಿಯಲ್ಲಿ ನಡೆಯಲಿರುವ `ಕಾವ್ಯ ಸಂಸ್ಕೃತಿ ಯಾನ'ದ  ಸರ್ವಾಧ್ಯಕ್ಷರಾಗಿ ಹಿರಿಯ ಕವಿ ಡಾ.ಕಾಶೀನಾಥ ಅಂಬಲಗಿ ಅವರು ಆಯ್ಕೆಯಾಗಿದ್ದಾರೆ ಎಂದು ಆಯೋಜಕರಾದ…

1 hour ago

ದೇಶವನ್ನು ಮುಂಚೂಣಿಯಲ್ಲಿ ತರಲು ಪ್ರತಿಯೊಬ್ಬ ನಾಗರಿಕರ ಸಹಕಾರ ಅತ್ಯಗತ್ಯ: ರಾಜ್ಯಪಾಲರು

ಮುಂಬೈ; ನಮ್ಮ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ವೇಗದಲ್ಲಿ ಸಾಗುತ್ತಿದೆ, ಮುಂಬರುವ ವರ್ಷಗಳಲ್ಲಿ ದೇಶವನ್ನು ವಿಶ್ವದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ…

1 hour ago

ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕದಿದ್ದರೆ ಸಮಾಜದ ಪ್ರತಿಯೊಬ್ಬರ ನೆಮ್ಮದಿ ಹಾಳಾಗುತ್ತದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು; ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕದಿದ್ದರೆ ಸಮಾಜದ ಪ್ರತಿಯೊಬ್ಬರ ನೆಮ್ಮದಿ ಹಾಳಾಗುತ್ತದೆ. ಯಾರೊಬ್ಬರೂ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿ…

2 hours ago

ಹಿಂದಿ ಮತ್ತು ಕನ್ನಡ ಭಾಷಾ ಸಾಹಿತ್ಯ ಭಾರತೀಯ ಸಾಹಿತ್ಯದ ಕೊಂಡಿ

ಕಲಬುರಗಿ: ಭಾರತದಲ್ಲಿ ಬಹಳ ಭಾಷೆಗಳಲ್ಲಿ ಸಾಹಿತ್ಯದ ರಚನೆ ಆಗುತ್ತದೆ, ಆದರೆ ಹಿಂದಿ ಮತ್ತು ಕನ್ನಡ ಭಾಷೆಗಳು ಭಾರತೀಯ ಭಾಷೆಯ ಪ್ರಮುಖ…

2 hours ago

ಕೆಕೆಆರ್‌ಡಿಬಿಗೆ ಕೇಂದ್ರ ಸರ್ಕಾರ ಮುಂದಿನ 5 ವರ್ಷಗಳ ಅವಧಿಗೆ ವಾರ್ಷಿಕ 5 ಸಾವಿರ ಕೋಟಿ ಅನುದಾನ ನೀಡಲಿ

ಕಲಬುರಗಿ; ಕಲಬುರಗಿ ಕೇಂದ್ರವಾಗಿರುವಂತೆ ಇರುವ ಹಿಂದುಳಿದ ಕಲ್ಯಾಣ ನಾಡಿನ ಜಿಲ್ಲೆಗಳಾದ ಕಲಬುರಗಿ, ಬೀದರ್‌, ಬಳ್ಳಾರಿ, ಯಾದಗಿರಿ, ರಾಯಚೂರು, ಕೊಪ್ಪಳ ವಿಜಯನಗರ…

2 hours ago

ಕಲಾವಿದ ಬಂಡಯ್ಯ ಹಿರೇಮಠಗೆ ಡಾ. ವಿಷ್ಣುವರ್ಧನ ಸೇವಾ ಪ್ರಶಸ್ತಿ

ಕಲಬುರಗಿ: ಆಳಂದ ತಾಲೂಕಿನ ಸುಂಟನೂರ ಗ್ರಾಮದ ಕಲಾವಿದ ,ಸಾಹಿತ್ಯ, ಧಾರವಾಹಿ ಕಲಾವಿದ ಕೀರ್ತನ, ಪುರಾಣ, ಪ್ರವಚನ ಪ್ರವಚನಕಾರರಾದ ರಂಗಗಳಲ್ಲಿ ಗಣನೀಯವಾದ…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420