ಕಲಬುರಗಿ: ಈ ಕಥಾ ಸಂಕಲವನ್ನು ಓದಿದರೆ ಮಾತು ಬಾರದ ಮೌನ ಆವರಿಸುತ್ತದೆ. ಉತ್ತರ ಕರ್ನಾಟಕದ ಜನ ಮತ್ತೆ ಮತ್ತೆ ಬರೆದು ಬೆಂಗಳೂರು- ಮೈಸೂರು ಭಾಗದ ಜನರಿಗೆ ಸವಾಲೊಡ್ಡುವ ಕೆಲಸ ಮಾಡಬೇಕು ಎಂದು ಚಿತ್ರನಟಿ ಜಯಲಕ್ಷ್ಮಿ ಪಾಟೀಲ ಹೇಳಿದರು.
ನಗರದ. ಕನ್ನಡ ಭವನದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಬೆಂಗಳೂರಿನ ಬಹುರೂಪಿ ವತಿಯಿಂದ ಪ್ರಕಟವಾಗಿರುವ ಸಂಧ್ಯಾ ಹೊನಗುಂಟಿಕರ್ ಅವರ ಹೆಸರು ಕಳೆದುಕೊಂಡ ಊರು ಕಥಾ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಲೇಖಕರು ನಿರಾಸೆರಾಗಬಾರದು. ಸಂಧ್ಯಾ ಹೊನಗುಂಟಿಕರ್ ಅವರ ಕಥೆಗಳು ಕಲ್ಯಾಣ ಕರ್ನಾಟಕದ ಪ್ರಾತಿನಿಧಿಕ ಕತೆಗಳಂತಿವೆ ಎಂದು ಹೇಳಿದರು.
ಕೃತಿ ಕುರಿತು ಮಾತನಾಡಿದ ಪತ್ರಕರ್ತೆ ರಶ್ಮಿ ಎಸ್ ಮಾತನಾಡಿ, ಕೊರೊನಾ ಕಾಲದ ನಂತರ ಬದಲಾದ ನಮ್ಮ ಮನೋವ್ಯಾಪಾರ ದ ಮಧ್ಯೆ ಮನಸಾಕ್ಷಿ, ಮನಸ್ಸಿನ ತುಮಲಗಳು ಇಲ್ಲಿನ 11 ಕಥೆಗಳಲ್ಲಿ ಕಂಡು ಬರುತ್ತವೆ ಎಂದು ತಿಳಿಸಿದರು.
ಕೋವಿಡ್ ನಂತಹ ದುರಿತ ಕಾಲದ ನಂತರ ಉದ್ಯೋಗ, ಹೊಟ್ಟೆ, ಮರ್ಯಾದೆ, ಮಾನ ಇವೆಲ್ಲ ತಳಮಳಗಳು ಇಲ್ಲಿ ಕಂಡು ಬರುತ್ತವೆ. ನಮ್ಮನ್ನು ನಾವು ಕಳೆದುಕೊಳ್ಳುವ, ಹುಡುಕುವ ಸೂಕ್ಷ್ಮ ಸಂವೇದನಾಶೀಲತೆ ಅಡಗಿದೆ. ಜೀವನದ ಸರ್ವ ಮುಖಗಳು ಈ ಕಥೆಗಳಲ್ಲಿ ಸಿಗುತ್ತವೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಪತ್ರಕರ್ತ ಜಿ.ಎನ್. ಮೋಹನ, ಪುಸ್ತಕ ಪ್ರಕಟ ಮಾಡುವುದು ಬೆಳ್ಳೊಳ್ಳಿ ಕಬಾಬ್ ಅಲ್ಲ. ಅದಕ್ಕೆ ಅನೇಕ ರೀತಿಯ ಸ್ಪರ್ಶ ಅಗತ್ಯವಾಗಿದೆ ಎಂದರು.
ಸಂಧ್ಯಾ ಹೊನಗುಂಟಿಕರ್ ಅವರು ಎರೆ ಹುಳುವಿನ ರೀತಿಯಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆಯಲ್ಲಿ ಸಂಧ್ಯಾ ಹೊಗುಂಟಿಕರ್ ಅವರು ತಮಗೆ ಕಲಿಸಿದ ಎಸ್.ಬಿ. ಪಾಟೀಲ, ಎಚ್.ಎನ್ ಹಬೀಬ್ ಅವರಿಗೆ ಗುರು ವಂದನೆ ಸಲ್ಲಿಸಿದರು.
ಹಿರಿಯ ಸಾಹಿತಿ ಅಪ್ಪಾರಾವ ಅಕ್ಕೋಣಿ, ಕತೆಗಾರ ಚಿತ್ರಶೇಖರ ಕಂಠಿ ವೇದಿಕೆಯಲ್ಲಿದ್ದರು. ಡಾ. ಸದಾನಂದ ಪೆರ್ಲ್ ನಿರೂಪಿಸಿದರು. ಪ್ರಭಾಕರ ಜೋಶಿ ಸ್ವಾಗತಿಸಿದರು. ಕತೆಗಾರ್ತಿ ಸಂಧ್ಯಾ ಹೊನಗುಂಟಿಕರ್ ಮಾತನಾಡಿದರು.
ನಾನು ಮಾಡಿದ ಎಲ್ಲ ಕೆಲಸಗಳಲ್ಲಿ ಕಲ್ಯಾಣ ಕರ್ನಾಟಕ ಆದ್ಯತೆಯಾಗಿರುತ್ತದೆ. ಅದರಲ್ಲೂ ಕಲಬುರಗಿ ಆಗಿರುತ್ತದೆ. ಕಲಬುರಗಿ ನನಗೆ ಹೊಸ ಕಣ್ಣೋಟವನ್ನು ಕೊಟ್ಟಿದೆ. -ಜಿ.ಎನ್.ಮೋಹನ, ಬೆಂಗಳೂರು.
ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…
ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…
ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್ಐಆರ್…
ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…
ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…
ಕಲಬುರಗಿ: ಇನ್ನರ್ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…