ನಗರಸಭೆಯ ವಿವಿಧ ಕಾಮಗಾರಿಗಳ ಮಂಜೂರಾತಿಗೆ ಸದಸ್ಯರ ಒಪ್ಪಿಗೆ

0
75

ಶಹಾಬಾದ:sನಗರಸಭೆಯ ನೂತನ ಅಧ್ಯಕ್ಷೆ ಚಂಪಾಬಾಯಿ ರಾಜು ಮೇಸ್ತ್ರಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಗರಸಭೆಯ ಸಭಾಂಗಣದಲ್ಲಿ ಸಾಮನ್ಯ ಸಭೆ ನಡೆಯಿತು.

ಸಭೆ ಪ್ರಾರಂಭವಾಗುತ್ತಿದ್ದಂತೆ ಎಸ್‍ಎಫ್‍ಸಿ ಮುಕ್ತ ನಿಧಿ ಹಾಗೂ 2023-24 ಮತ್ತು 24-25ನೇ ಸಾಲಿನ 15ನೇ ಹಣಕಾಸು ಯೋಜನೆ ವಿವಿಧ ಕಾಮಗಾರಿಗಳಿಗೆ ಜಿಲ್ಲಾಧಿಕಾರಿಗಳು 1.25 ಕೋಟಿ ರೂ. ಅನುದಾನ ಮಂಜೂರಾತಿ ನೀಡಿದ್ದಾರೆ ಎಂದು ಅದಕ್ಕೆ ತಮ್ಮ ಸಹಿ ಮಾಡಿಬೇಕೆಂದು ಪೌರಾಯುಕ್ತರು ತಿಳಿಸಿದರು.

Contact Your\'s Advertisement; 9902492681

ಅದಕ್ಕೆ ವಿರೋಧಿಸಿದ ನಗರಸಭೆಯ ಸದಸ್ಯ ರವಿ ರಾಠೋಡ, ಸಹಿ ಮಾಡುವುದಕ್ಕಿಂತ ಮೊದಲು ಸಾಮನ್ಯ ಸಭೆ ಮುಂಚೆ ಈ ಹಿಂದಿನ ಖರ್ಚು-ವೆಚ್ಚಗಳ ಬುಕ್‍ಲೆಟ್ ನೀಡಿ ನಂತರ ಸಹಿ ಮಾಡುತ್ತೆವೆ ಎಂದು ಒತ್ತಾಯಿಸಿದರು.

ಅಲ್ಲದೇ ನಗರಸಭೆಯ ಸದಸ್ಯ ನಾಗರಾಜ ಕರಣಿಕ್ ಮಾತನಾಡಿ, ಎಸ್‍ಸಿಪಿ/ಟಿಎಸ್‍ಪಿ ಯೋಜನೆಯಲ್ಲಿ ದಲಿತ ಸಮುದಾಯಗಳ ಬಡಾವಣೆಯಲ್ಲಿ ಬೀದಿದೀಪ ಅಳವಡಿಸುವ ಬದಲು ಆ ಯೋಜನೆಯ ಸವಲತ್ತು ದಲಿತ ವರ್ಗದವರಿಗೆ ನೀಡದೇ ಇತರರಿಗೆ ನೀಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಾರ್ಡ ನಂ. 16ರಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಹೇಳಿ ಹಲವು ವರ್ಷಗಳಾದರೂ ನಿರ್ಮಿಸಿಲ್ಲ.ಆದರೆ ನಗರದಲ್ಲಿ ಅಕ್ರಮ ಕಟ್ಟಡಗಳ ತಲೆ ಎತ್ತಿಗೆ.ಅಲ್ಲದೇ ಕಟ್ಟಡ ಪರವಾನಾಗಿ ಪಡೆಯದೇ ಕಟ್ಟಡ ನಿರ್ಮಾಣ ಮಾಡಿದ್ದಾರೆ.ಕೆಲವು ಕಡೆ ಸಾರ್ವಜನಿಕರ ಸ್ಥಳಗಳಲ್ಲಿ ನಿರ್ಮಿಸಿದ್ದಾರೆ.

ಕೂಡಲೇ ತೆರವುಗೊಳಿಸಬೇಕು.ಅಲ್ಲದೇ ಅಕ್ರಮ ಕಟ್ಟಡಗಳಿಗೆ ಅಧಿಕಾರಿಗಳು ಖಾತಾ ಹೇಗೆ ನೀಡಿದ್ದಾರೆ.ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ಮನಸ್ಸಿಗೆ ಬಂದಂತೆ ಆಡಳಿತ ನಡೆಸಲಾಗುತ್ತಿದೆ ಎಂದು ಪ್ರಶ್ನೆ ಮಾಡಿದರಲ್ಲದೇ, ಜಿಲ್ಲಾಧಿಕಾರಿಗಳ ಆಡಳಿತಾವಧಿಯಲ್ಲಿ ಸಾಕಷ್ಟು ಹಣ ದುರುಪಯೋಗವಾಗಿದೆ. ಅದರ ಲೆಕ್ಕಪತ್ರ ನೀಡಿ ಎಂದು ಒತ್ತಾಯಿಸಿದರು.ಅದಕ್ಕೆ ಜಿಲ್ಲಾಧಿಕಾರಿಗಳ ಆಡಳಿತಾವಧಿಯ ಲೆಕ್ಕಪತ್ರ ನೀಡುವುದಕ್ಕೆ ಬರುವುದಿಲ್ಲ ಎಂದು ಹೇಳಿದಕ್ಕೆ ನಗರಸಭೆಯ ಬಿಜೆಪಿ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಸಭೆಯಿಂದ ಹೊರನಡೆದರು.

ಈ ಮಧ್ಯೆ ಎಸ್‍ಎಫ್‍ಸಿ ಮುಕ್ತ ನಿಧಿ ಹಾಗೂ 2023-24 ಮತ್ತು 24-25ನೇ ಸಾಲಿನ 15ನೇ ಹಣಕಾಸು ಯೋಜನೆ ವಿವಿಧ ಕಾಮಗಾರಿಗಳ ಮಂಜೂರಾತಿಗೆ ಇನ್ನುಳಿದ ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿದರು.ಅಲ್ಲದೇ ನಗರಸಭೆ ಸದಸ್ಯ ಡಾ.ಅಹ್ಮದ್ ಪಟೇಲ್ ಮಾತನಾಡಿ, ಎಡಿಬಿ ಯೋಜನೆಯ 24*7 ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕು.

ಪ್ರತಿ ತಿಂಗಳು ಬಡ್ಡಿ ಸಮೇತ ಬಿಲ್ ಬರುತ್ತಿದೆ.ಇದರಿಂದ ಸಾರ್ವಜನಿಕರು ಸಂಕಷ್ಟ ತಲೆದೋರಿದೆ. ಕೂಡಲೇ ನೀರಿನ ಕರ ವಸೂಲಾತಿಗೆ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಕಟ್ಟಿಕೊಳ್ಳುವ ಹಾಗೇ ಕ್ರಮಕೈಗೊಳ್ಳಬೇಕು ಎಂದರು. ಇದಕ್ಕೆ ಸರ್ವ ಸದಸ್ಯರು ಒಪ್ಪಿಗೆ ನೀಡಿ, ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ಠರಾವು ಪಾಸ್ ಮಾಡಿದರು.

ಅಲ್ಲದೇ ಎಡಿಬಿ ಯೋಜನೆಯ ಟೆಂಡರ್ ಮುಗಿದಿದ್ದು, ಅದನ್ನು ನಗರಸಭೆಯ ಸುಪರ್ದಿಗೆ ನೀಡಲು ಮುಂದಾಗಿದ್ದಾರೆ ಎಂದ ಪೌರಾಯುಕ್ತ ಡಾ. ಕೆ.ಗುರಲಿಂಗಪ್ಪ ತಿಳಿಸಿದರು.ಅದಕ್ಕೆ ಸದಸ್ಯರು ಯಾವುದೇ ಕಾರಣಕ್ಕೂ ನಗರಸಭೆಯ ಸುಪರ್ದಿಗೆ ತೆಗೆದುಕೊಳ್ಳಬೇಡಿ. ವಾರ್ಷಿಕ ನಿರ್ವಹಣೆಗೆ ಸುಮಾರು 27 ಲಕ್ಷ ರೂ. ಖರ್ಚಾಗುತ್ತದೆ.ಆದರೆ ಅದರಿಂದ ಕೇವಲ 12 ಲಕ್ಷ ರೂ ಕರ ವಸೂಲಾತಿಯಾಗುತ್ತಿದೆ. ಇದರಿಂದ ಏನು ಪ್ರಯೋಜನ ಎಂದು ಕೇಳಿದರು.

ನಗರದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ನಗರದ ಹಲವು ಕಡೆ ಸಿಸಿ ಕ್ಯಾಮೆರಾ ಅಳವಡಿಸಿದರೂ, ಯಾವುದು ಕಾರ್ಯ ನಿರ್ವಹಿಸುತ್ತಿಲ್ಲ ಏಕೆ ಎಂದು ಕೇಳಿದರು.ಅದಕ್ಕೆ ಎಇಇ ಶರಣು ಪೂಜಾರ ಕಿಡಿಗೇಡಿಗಳು, ಕೇಬಲ್ ಆಪರೇಟರ್‍ಗಳು ಕೇಬಲ್ ಕಟ್ ಮಾಡುತ್ತಾರೆ ಎಂದು ಹಾರಿಕೆ ಉತ್ತರ ನೀಡಿದರು.

ಮುಂದಿನ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಬಗ್ಗೆ ಚರ್ಚಿಸಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆಯ ಉಪಾಧ್ಯಕ್ಷೆ ಫಾತಿಮಾ ಭಾಕರ್,ನಗರಸಭೆಯ ಅಧಿಕಾರಿ ವರ್ಗ ಹಾಗೂ ಸರ್ವ ಸದಸ್ಯರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here