ಸುರಪುರ: ತಾಲೂಕಿನ ಮಾಚಗುಂಡಾಳ ಗ್ರಾಮದಲ್ಲಿ ಶನಿವಾರದಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಗ್ರಾಮ ಶಾಖೆ ಉದ್ಘಾಟಿಸಿ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ವೇದಿಕೆಯ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಭೈರಿಮಡ್ಡಿ ಮಾತನಾಡಿ ಸಂಘಟನೆಯು ಕನ್ನಡ ಭಾಷೆ, ನೆಲ, ಜಲ ರಕ್ಷಣೆಯ ಕೆಲಸಗಳ್ಲಿ ತೊಡಗಿಸಿಕೊಂಡಿದ್ದು ಕನ್ನಡಿಗರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದು ನೂತನ ಪದಾಧಿಕಾರಿಗಳು ಕನ್ನಡ ಪರ ಹೋರಾಟಕ್ಕೆ ಮುಂದಾಗಬೇಕು ಎಂದು ಅವರು ಹೇಳಿದರು, ಗ್ರಾಮ ಶಾಖೆಯ ಪದಾಧಿಕಾರಿಗಳು ವೇದಿಕೆಯ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ನಡೆದುಕೊಳ್ಳಬೇಕು. ಸಂಘಟನೆಯ ಕನ್ನಡ ಪರ ಹೋರಾಟಗಳಲ್ಲಿ ಸದಾ ಸಿದ್ಧರಿರಬೇಕು ಎಂದು ಕರೆ ನೀಡಿದರು
ಈ ಸಂದರ್ಭದಲ್ಲಿ ಪ್ರಮುಖರಾದ ಹಣಮಗೌಡ ಶಖಾಪುರ, ಹಣಮಂತ ಹಾಲಗೇರಿ, ಕೃಷ್ಣ ಮಂಗಿಹಾಳ, ಆನಂದ ಮಾಚಗುಂಡಾಳ, ಶ್ರೀನಿವಾಸ ಭೈರಿಮಡ್ಡಿ, ಅಯ್ಯಪ್ಪ ವಗ್ಗಾಲಿ, ಶ್ರವಣಕುಮಾರ ನಾಯಕ, ಪ್ರಭು ಮಂಗಿಹಾಳ, ದೇವಪ್ಪ ಮಾಚಗುಂಢಾಳ, ಮಲ್ಲಿಕಾರ್ಜುನ ಭೈರಿಮಡ್ಡಿ, ರಂಗನಾಥ ಕವಡಿಮಟ್ಟಿ, ಭೀಮರಾಯ ಬಾದ್ಯಾಪುರ, ಚನ್ನಪ್ಪ ಹಾಲಗೇರಿ ಇದ್ದರು.
ಗ್ರಾಮ ಶಾಖೆ ಪದಾಧಿಕಾರಿಗಳು: ದೇವಿಂದ್ರಪ್ಪ ನಾಟೇಕಾರ (ಗೌರವಾಧ್ಯಕ್ಷ), ಭೀಮರಾಯ ಪೂಜಾರಿ (ಅಧ್ಯಕ್ಷ), ದೇವಿಂದ್ರಪ್ಪಗೌಡ (ಉಪಾಧ್ಯಕ್ಷ), ಕೃಷ್ಣಪ್ಪ ನಾಟೇಕಾರ (ಪ್ರಧಾನ ಕಾರ್ಯದರ್ಶಿ), ಬಸವರಾಜ ಪುಜಾರಿ (ಸಹ ಕಾರ್ಯದರ್ಶಿ), ಭೀಮನಗೌಡ, ರಾಘವೇಂದ್ರ ನಾಟೇಕಾರ (ಸಂಘಟನಾ ಕಾರ್ಯದರ್ಶಿಗಳು), ಭೀಮಣ್ಣ ರಾಮನಗೌಡ (ಸಹ ಸಂಘಟನಾ ಕಾರ್ಯದರ್ಶಿ), ಯಂಕಪ್ಪ ಚನ್ನೂರ (ಪ್ರಧಾನ ಸಂಚಾಲಕ), ದೇವಿಂದ್ರಪ್ಪ ಪುಜಾರಿ (ಸಂಚಾಲಕ), ಮಲ್ಲಪ್ಪ ನಾಟೇಕಾರ (ಖಜಾಂಚಿ) ಆಯ್ಕೆಗೊಳಿಸಲಾಯಿತು.
ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…
ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…
ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…
ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್ನ ದಾಸ್ನಾ…
ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…
ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…