ರಾಷ್ಟ್ರಕ್ಕಾಗಿ ಪ್ರಾಣ ಕೊಟ್ಟ ಸ್ವಾತಂತ್ರ್ಯ ವೀರರನ್ನು ನಾಯಕರಾಗಿ ಮಾಡಿಕೊಳ್ಳಿ: ವೀರೇಶ ಸಾಲಿಮಠ

0
41

ಕಲಬುರಗಿ: ಇಂದಿನ ಯುವಕರು ಸಿನಿಮಾ ನಾಯಕರು ಮತ್ತು ಕ್ರಿಕೆಟ್ ಆಟಗಾರರು ತಮ್ಮ ಜೀವನಕ್ಕೆ ಆದರ್ಶವಾಗಿ ಇಟ್ಟುಕೊಳ್ಳದೇ ರಾಷ್ಟ್ರಕ್ಕಾಗಿ ಪ್ರಾಣ ಕೊಟ್ಟ ಸ್ವಾತಂತ್ರ್ಯ ವೀರರನ್ನು ತಮ್ಮ ನಾಯಕರಾಗಿ ಮಾಡಿಕೊಳ್ಳುವುದು ಅವಶ್ಯಕ ಎಂದು ವೀರೇಶ ಸಾಲಿಮಠ ಹೇಳಿದರು.

ನಿನ್ನೆ ನಗರದ ಭವಾನಿ ನಗರದಲ್ಲಿರುವ ಬಬಲಾದ ಶ್ರೀಮಠದಲ್ಲಿ ನಡೆದ ಶಿವಾನುಭವಗೋಷ್ಠಿಯ ೮೦ನೇ ಮಾಲಿಕೆಯಲ್ಲಿ ಮುಂದುವರಿದು ಮಾತನಾಡುತ್ತಾ ಕೇವಲ ೧೨ನೇ ವಯಸ್ಸಿನಲ್ಲಿ ದೇಶದ ಸ್ವಾತಂತ್ರ್ಯದ ಹೋರಾಟಕ್ಕೆ ಧುಮುಕಿದ ವೀರ ಭಗತಸಿಂಗ ಇನ್ನೇನು ಬ್ರೀಟಿಷರು ನೇಣುಗಂಬಕ್ಕೆ ಏರಿಸುತ್ತಾರೆಂಬ ವಿಷಯ ಗೊತ್ತಾದರೂ ಕೂಡ ಭಗತಸಿಂಗ ಚಿಂತಿಸದೆ, ನಾನು ಪ್ರಾಣ ಕೊಡುತ್ತಿರುವುದು ರಾಷ್ಟ್ರಕ್ಕಾಗಿ ಎಂದು ಹೆಮ್ಮೆಯಿಂದ ನಗು ನಗುತ್ತಾ ನೇಣುಗಂಬಕ್ಕೆ ಕೊರಳೊಡ್ಡಿದ ಭಗತಸಿಂಗರೆ ಇಂದಿನ ವಿದ್ಯಾರ್ಥಿ ಯುವಕರಿಗೆ ಆದರ್ಶವಾಗಬೇಕೆಂದು ಹೇಳಿದರು. ರಾಷ್ಟ್ರಪ್ರೇಮ ಬೆಳೆಸಿಕೊಂಡು ಇಂದಿನ ಯುವಕರು ಮುಂದಿರುವ ಸವಾಲುಗಳಿಗೆ ಪರಿಹಾರ ಹುಡುಕಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಮುಖ್ಯ ಅತಿಥಿಗಳಾದ ಕಲಬುರಗಿ ಉತ್ತರ ಮಂಡಲದ ಭಾರತೀಯ ಜನತಾ ಪಕ್ಷದ ನೂತನ ಅಧ್ಯಕ್ಷರಾದ ಅಶೋಕ ಮಾನಕರ್ ಅವರು ಮಾತನಾಡುತ್ತಾ ಕಲ್ಯಾಣ ನಾಡಿನಲ್ಲಿ ಸಂತರು, ಶರಣರು ನಡೆದಾಡಿದ ಪವಿತ್ರ ಸ್ಥಳ ಇಂತಹ ನಾಡಿನಲ್ಲಿ ಜನಿಸಿರುವುದು ನಮ್ಮ ಸೌಭಾಗ್ಯ, ಇಂತಹ ಸಂದರ್ಭದಲ್ಲಿ ಶಿವಾನುಭವಗೋಷ್ಠಿ ಮುಖಾಂತರ ಅಧ್ಯಾತ್ಮಿಕದ ಬೀಜ ಬಿತ್ತಿ ಸುಂದರ ಸಮಾಜ ನಿರ್ಮಿಸುತ್ತಿರುವ ಬಬಲಾದ ಮಠದ ಕಾರ್ಯ ಶ್ಲಾಘನೀಯ ಎಂದು ನುಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ಮ.ನಿ.ಪ್ರ.ಸ್ವ. ಗುರುಪಾದಲಿಂಗ ಶಿವಯೋಗಿಗಳು ವಹಿಸಿದ್ದರು.

ಇದೇ ಸಂದರ್ಭದಲ್ಲಿ ಶಿವಕುಮಾರ ಬಿ. ಕಲಬುರಗಿರವರ ೨೦೨೦ನೇ ವರ್ಷದ ದಿನದರ್ಶಿಕೆ ಬಿಡುಗಡೆಗೊಳಿಸಲಾಯಿತು. ಸಂಗಮೇಶ ಹೂಗಾರ ಪ್ರಾರ್ಥಿಸಿದರು. ಶಿಕ್ಷಕರಾದ ದೇವಯ್ಯ ಗುತ್ತೇದಾರ ನಿರೂಸಿದರು, ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಸ್ವಾಗತಿಸಿದರು, ಧನರಾಜ ಸಣಮನಿ ವಂದಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮಠದ ಕಾರ್ಯದರ್ಶಿಗಳಾದ ಬಸಯ್ಯ ಶಾಸ್ತ್ರೀ, ಶೇಖರ ದೇಗಾಂವ, ಕವಿತಾ ದೇಗಾಂವ, ವೈಜನಾಥ ನಂದ್ಯಾಳ, ವೀರಯ್ಯ ಸ್ವಾಮಿ, ಬಸಯ್ಯ ಸ್ವಾಮಿ, ಅಮರೇಶ್ವರಿ ಸಂಗಮೇಶ ಹೂಗಾರ, ಪ್ರಕಾಶ ರೋಳೆ, ಜಗನ್ನಾಥ ಸಜ್ಜನಶೆಟ್ಟಿ ಸೇರಿದಂತೆ ಶ್ರೀ ಮಠದ ಅನೇಕ ಭಕ್ತರೂ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here