ಕಲಬುರಗಿ: ಪ್ರಸಕ್ತ ೨೦೧೯ ನೇ ಸಾಲಿನ ರಾಜ್ಯಮಟ್ಟದ ಅನುಭಾವ ಕವಿ ಮಧುರಚೆನ್ನರ ಪ್ರಶಸ್ತಿಗೆ ಲೇಖಕ, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಅವರು ಆಯ್ಕೆಯಾಗಿದ್ದಾರೆ.
ಇದೇ ತಿಂಗಳು ೨೯ ರಂದು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಜೀವನಾಡಿ ಕರ್ನಾಟಕ ಸಾಹಿತ್ಯ ವೇದಿಕೆ ಹಾಗೂ ಭಾರತ ಯುವ ವೇದಿಕೆ ವಿಜಯಪುರ ಸಂಯುಕ್ತಾಶ್ರಯದಲ್ಲಿ ಚಡಚಣ ಮೋಹನ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿರುವ ‘ರಾಜ್ಯಮಟ್ಟದ ಗಡಿನಾಡು ಕನ್ನಡ ಸಾಹಿತ್ಯೋತ್ಸವ -೨೦೧೯’ ಕಾರ್ಯಕ್ರಮದಲ್ಲಿ ಮಹಿಪಾಲರೆಡ್ಡಿ ಅವರ ಸಾಃಇತ್ಯ ಸೇವೆ ಪರಿಗಣಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ ಎಂದು ಕಾರ್ಯಕ್ರಮದ ಸಂಚಾಲಕ ಸಂತೋಷಕುಮಾರ ಎಸ.ಅಗಡಿ ತಿಳಿಸಿದ್ದಾರೆ.
ಕಾವ್ಯ, ಕಥೆ, ಅಂಕಣ ಸಾಹಿತ್ಯ, ನಾಟಕ, ಮಕ್ಕಳ ಸಾಹಿತ್ಯ, ಮಾಧ್ಯಮ, ಚರಿತ್ರೆ, ಸಂಕೀರ್ಣ ಸೇರಿದಂತೆ ವೈವಿಧ್ಯ ಕ್ಷೇತ್ರವನ್ನೊಳಗೊಂಡಂತೆ, ಇದೂವರೆಗೆ ೩೮ ಕೃತಿಗಳನ್ನು ಮಹಿಪಾಲರೆಡ್ಡಿ ಅವರು ಬರೆದಿದ್ದಾರೆ.
ಲೇಖಕ ಮಹಿಪಾಲರೆಡ್ಡಿ ಅವರ ಜೊತೆಗೆ ಇನ್ನೂ ನಾಲ್ವರನ್ನು ಅನುಭಾವ ಕವಿ ಮಧುರಚೆನ್ನರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹಿರಿಯ ಲೇಖಕಿ ಶಶಿಕಲಾ ವೀರಯ್ಯ ಸ್ವಾಮಿ (ಹುಬ್ಬಳ್ಳಿ), ಡಾ.ಶಿವಾನಂದ ಕುಬಸದ (ಮುಧೋಳ), ಸಾಹಿತಿ ಸತ್ಯಾನಂದ ಪಾತ್ರೋಟ (ಬಾಗಲಕೋಟೆ), ಸೋಮನಾಥ ಗೀತಯೋಗಿ (ಸಾಲೋಟಗಿ) ಅವರನ್ನು ಸಹ ಅನುಭಾವ ಕವಿ ಮಧುರಚೆನ್ನ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂತೋಷಕುಮಾರ ತಿಳಿಸಿದ್ದಾರೆ.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…