ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಕಸಾಪ ಸಜ್ಜು

0
128

ಕಲಬುರಗಿ: ಮುಂಂದಿನ ಫೆಭ್ರವರಿ ತಿಂಗಳು ೫, ೬ ಮತ್ತು ೭ರಂದು ಗುಲ್ಬರ್ಗ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೇಂದ್ರ ಕಸಾಪದ ಜೊತೆಗೆ ಜಿಲ್ಲಾ ಕಸಾಪ ಕೂಡ ಸಜ್ಜುಗೊಂಡಿದೆ.

೧೯೮೭ರ ನಂತರ ಕಲಬುರಗಿ ನೆಲದಲ್ಲಿ ನಡೆಯಲಿರುವ ಈ ಸಮ್ಮೇಳನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ರಚನೆಗೊಂಡಿರುವ ವಿವಿಧ ಸಮಿತಿಗಳ ಅಧ್ಯಕ್ಷ, ಸದಸ್ಯರು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು, ಕನ್ನಡ ಭವನದ ಕಟ್ಟಡವನ್ನು ಕೂಡ ಇನ್ನೇನು ಕೆಲ ದಿನಗಳಲ್ಲೇ ಸುಣ್ಣ, ಬಣ್ಣ ಬಳಿದು ಶೃಂಗಾರಗೊಳಿಸಲಾಗುವುದು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ “ಇ-ಮೀಡಿಯಾ ಲೈನ್” ಗೆ ತಿಳಿಸಿದ್ದಾರೆ.

Contact Your\'s Advertisement; 9902492681

ಬಹಳ ದಿನಗಳ ನಂತರ ಕಲಬುರಗಿ ಜನರಿಗೆ ಸಮ್ಮೇಳನ ನಡೆಸುವ, ನೋಡುವ, ಕೇಳುವ ಸೌಭಾಗ್ಯ ಒದಗಿ ಬಂದಿದೆ. ಸಣ್ಣ ಪುಟ್ಟ ಲೋಪ- ದೋಷಗಳಿದ್ದರೂ ಅವುಗಳನ್ನು ಮನ್ನಿಸಿ ಸಮ್ಮೇಳನ ಯಶಸ್ವಿಗೊಳಿಸಿ ಕಲಬುರಗಿಯ ಕೀರ್ತಿ ಹೆಚ್ಚಿಸಬೇಕು. -ಡಾ. ಮನು ಬಳಿಗಾರ, ಅಧ್ಯಕ್ಷ, ಕಸಾಪ ಕೇಂದ್ರ ಸಮಿತಿ, ಬೆಂಗಳೂರು

ಪುಸ್ತಕ ಮಳಿಗೆ, ಪ್ರತಿನಿದಿ ಶುಲ್ಕ ನೋಂದಣಿ, ದ್ವಾರಗಳ ನಿರ್ಮಾಣ ಮುಂತಾದ ಕಾರ್ಯಗಳು ಬಹುತೇಕ ಮುಗಿದ್ದು, ನಾಳೆ ಇವುಗಳ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಸಮ್ಮೇಳನದ ನೆನಹಿನಲ್ಲಿ ಕವಿಜನ ಮಾರ್ಗ ಸ್ಮರಣ ಸಂಚಿಕೆ ಕೂಡ ಇನ್ನೆರಡು ದಿನಗಳಲ್ಲಿ ಅಚ್ಚಿಗೆ ಹೋಗಲಿದೆ ಎಂದು ತಿಳಿಸಿದರು.

ಸಮ್ಮೇಳನದ ಅಂಗವಾಗಿ ಸುಮಾರು ೬೫ ದ್ವಾರಗಳನ್ನು ನಿರ್ಮಿಸಲಾಗುವುದು. ಮುಖ್ಯ ವೇದಿಕೆಗೆ ಶ್ರೀ ವಿಜಯ ಹೆಸರಿಡುವುದನ್ನು ಅಂತಿಮಗೊಳಿಸಲಾಗಿದೆ. ಸಾಹಿತ್ಯ ಲೋಕದ ದಿಗ್ಗಜರಾದ ಪ್ರೊ. ಎಂ.ಎಸ್. ಲಠ್ಠೆ, ಚೆನ್ನಣ್ಣ ವಾಲೀಕಾರ, ವಚನ ವಸಂತದ ಕೊನೆಯ ಕೋಗಿಲೆ ಜೇವರ್ಗಿಯ ಷಣ್ಮುಖ ಶಿವಯೋಗಿ, ತತ್ವಪದಕಾರರ, ಗೀಗಿ ಪದಕಾರರು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಮಹನೀಯರು, ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳ ದ್ವಾರಗಳನ್ನು ನಿರ್ಮಿಸಲಾಗುವುದು ಎಂದು ವಿವರಿಸಿದರು.

ನಮ್ಮ ಭಾಗದ ಜನರು ಬೇರೆ ಕಡೆ ನಡೆಯುವ ಸಮ್ಮೇಳನಕ್ಕೆ ಹೋಗುತ್ತಿದ್ದರು. ಆದರೆ ಈ ಬಾರಿಯ ವಿಶೇಷವೇನೆಂದರೆ ಮೈಸೂರು, ಚಾಮರಾಜ ನಗರ, ದಾವಣಗೆರೆ, ಕೊಡಗು ಜಿಲ್ಲೆಗಳ ಜನರು ಕಲಬುರಗಿಯಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಭಾಗವಹಿಸಲು ಕಾತುರರಾಗಿದ್ದಾರೆ. ಏಕೆಂದರೆ ಮೇಳಿನ ಈ ಜಿಲ್ಲೆಗಳಲ್ಲಿ ಪ್ರತಿನಿಧಿ ಶುಲ್ಕ ನೋಂದಣಿಗಾಗಿ ಸಾಕಷ್ಟು ಬೇಡಿಕೆ ಬರುತ್ತಿದೆ. ಎಲ್ಲ ಕನ್ನಡ ಮನಸ್ಸುಗಳು ಸೇರಿ ಸಮ್ಮೇಳನ ಯಶಸ್ವಿಗೊಳಿಸುವಂತೆ ಕೈ ಮುಗಿದು ಕೇಳುತ್ತೇನೆ.     – ವೀರಭದ್ರ ಸಿಂಪಿ, ಜಿಲ್ಲಾ ಕಸಾಪ ಅಧ್ಯಕ್ಷ, ಕಲಬುರಗಿ

ಜನಪ್ರತಿನಿಧಿಗಳು ಜಿಲ್ಲಾಡಳಿತದೊಂದಿಗೆ ಈಗಾಗಲೇ ಹಲವು ಬಾರಿ ಮೀಟಿಂಗ್ ಸೇರಿ ಸಮ್ಮೇಳನ ಅದ್ದೂರಿ ಮತ್ತು ಅಚ್ಚು ಕಟ್ಟಾಗಿ ನಡೆಯುವಂತೆ ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿ, ಸಮ್ಮೇಳನ ನಡೆಯುವ ಸ್ಥಳದ ಸ್ವಚ್ಛತೆ ಕೂಡ ನಡೆಸಲಾಗುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here