ಸುರಪುರ: ಮಹಾತ್ಮ ಗಾಂಧಿಯವರು ಕೇವಲ ಭಾರತ ಮಾತ್ರವಲ್ಲದೆ ಇಡೀ ಪ್ರಪಂಚವೇ ಮೆಚ್ಚಿದ ಮಹಾನ್ ನಾಯಕರಾಗಿದ್ದಾರೆ.ಅವರು ಜಗತ್ತಿಗೆ ಕೊಟ್ಟಿರುವ ಸತ್ಯ ಅಹಿಂಸೆಯ ಸಂದೇಶಗಳು ಹಾಗು ಶಾಂತಿಯುತವಾದ ಸತ್ಯಾಗ್ರಹದ ಹೋರಾಟ ಬಹುದೊಡ್ಡ ಅಸ್ತ್ರವಾಗಿದೆ.ಅಂತಹ ಮಹಾತ್ಮ ಗಾಂಧಿ ಕುರಿತಾದ ರೂಪಕ ನೋಡಲು ಸಿಕ್ಕಿರುವುದು ಭಾಗ್ಯ ಎಂದು ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಮಾತನಾಡಿದರು.
ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ರಂಗ ಪಯಣ ಧಾರವಾಡ,ಸಾರ್ವಜನಿಕ ಶಿಕ್ಷಣ ಇಲಾಖೆ,ರಿಕ್ರಿಯೇಷನ್ ಕ್ಲಬ್ ಸುರಪುರ ಹಾಗು ಅಜೀಂ ಪ್ರೇಮ್ಜಿ ಪೌಂಡೇಶನ್ ಇವರುಗಳ ಸಹಕಾರದಲ್ಲಿ ಬೋಳುವಾರ ಮಹ್ಮದ್ ಕುಂಇ ಇವರು ರಚಿಸಿರುವ ಪಾಪು ಗಾಂಧಿ ಗಾಂಧಿ ಬಾಪುವಾದ ಕಥೆ ಎಂಬ ಕಲಬುರಗಿ ರಂಗಾಯಣದ ಕಲಾವಿದರ ರಂಗ ರೂಪಕ ಅಭಿನಯ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ,ಇಂತಹ ಮನೋಜ್ಞವಾದ ರೂಪಕ ಶಾಲಾ ಮಕ್ಕಳಿಗೆ ತೋರಿಸುವುದು ತುಂಬಾ ಅವಶ್ಯಕವಾಗಿದೆ.ಇದರಿಂದ ಮಕ್ಕಳಲ್ಲಿ ದೇಶಪ್ರೇಮ,ಸತ್ಯ ನ್ಯಾಯಯುತವಾದುದರ ಪರವಾಗಿ ನಿಲ್ಲುವ ಗುಣಗಳನ್ನು ಬೆಳೆಸಲು ಸಾಧ್ಯವಾಗಲಿದೆ.ಈ ಪ್ರದರ್ಶನ ನೋಡಿ ಮಕ್ಕಳು ಗಾಂಧಿಯಂತಾಗಲೆಂದು ಹಾರೈಸಿದರು.
ನಂತರ ನಡೆದ ರಂಗ ರೂಪಕವನ್ನು ನೋಡಿದ ಮಕ್ಕಳು ಮಹಾತ್ಮ ಗಾಂಧಿಯವರ ಜೀವನ ರೀತಿಯನ್ನು ಕಂಡು ಬೆರಗಾದರು ಹಾಗು ಎಲ್ಲಾ ಮಕ್ಕಳು ಗಾಂಧಿಯ ಆದರ್ಶವನ್ನು ಗುಣಗಾನ ಮಾಡಿದರು.ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನ ಓಲೆಕಾರ,ಕಸಾಪ ತಾಲೂಕು ಅಧ್ಯಕ್ಷ ಶ್ರೀನಿವಾಸ ಜಾಲವಾದಿ,ನಿವೃತ್ತ ಲೋಕಾಯುಕ್ತ ಎಸ್ಪಿ ಸಿ.ಎನ್.ಭಂಡಾರೆ,ಎಪಿಎಫ್ನ ಸುರೇಶ ಗೌಡ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುರಪುರ ಕ್ಲಸ್ಟರ್ನ ಸಾವಿರಾರು ಮಕ್ಕಳು ಹಾಗು ಶಿಕ್ಷಕರು ಭಾಗವಹಿಸಿ ವೀಕ್ಷಿಸಿದರು.ರಂಗ ತಂಡದ ನಿರ್ದೇಶಕರಾದ ಹರಿಕೃಷ್ಣ ಇವರಿಗೆ ಎಲ್ಲರಿಂದ ಅಭಿನಂಧನೆ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸವರಾಜ ಜಮದ್ರಖಾನಿ,ಬಿಆರ್ಪಿ ಖಾದರ್ ಪಟೇಲ್,ಆರ್.ಕೆ.ಕೋಡಿಹಾಳ,ಜಾಕೀರ್ ಹುಸೇನ್,ಸಾಮುವೆಲ್,ರವಿ ಗಲಗಿನ್,ಮಲ್ಲಿಕಾರ್ಜುನ ಕಟ್ಟಿಮನಿ,ಜೋಗಪ್ಪ,ಕೃಷ್ಣ ದರಬಾರಿ,ಎಪಿಎಫ್ನ ಅಜೀಂ ಫರೀದಿ,ವಿನೋದ ಕುಮಾರ,ಪರಮಣ್ಣ ತಳಗೇರಿ,ಶಿವಕುಮಾರ ಸೇರಿದಂತೆ ಅನೇಕರಿದ್ದರು.ಅನ್ವರ್ ಜಮಾದಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…