ನಿರ್ದೇಶಕರೆಲ್ಲರು ಬಸವೇಶ್ವರ ಪತ್ತಿನ ಸಹಕಾರ ಸಂಘವನ್ನು ಎತ್ತರಕ್ಕೆ ಬೆಳಸಿ: ದಾಸಬಾಳ ಶ್ರೀ

0
91

ಸುರಪುರ: ಸಹಕಾರ ರಂಗ ಇಂದು ದೊಡ್ಡ ಮಟ್ಟದಲ್ಲಿ ಬೆಳೆದಿದೆ,ತಾವು ಸಹಕಾರ ರಂಗದ ಭಾಗವಾಗಿ ಇಂದು ಬಸವೇಶ್ವರ ಪತ್ತಿನ ಸಹಕಾರ ಸಂಘಕ್ಕೆ ನೂತನ ನಿರ್ದೇಶಕರಾಗಿ ನೇಮಕಗೊಂಡಿರುವುದು ಸಂತೋಷದ ಸಂಗತಿ ತಾವೆಲ್ಲರು ಬಸವೇಶ್ವರ ಪತ್ತಿನ ಸಹಕಾರ ಸಂಘವನ್ನು ಎತ್ತರಕ್ಕೆ ಬೆಳೆಸುವಂತೆ ಯಾದಗಿರಿಯ ದಾಸಬಾಳ ಮಠದ ವಿರೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ನಗರದ ತಿಮ್ಮಾಪುರದಲ್ಲಿ ಆರಂಭಗೊಂಡಿರುವ ಶರಣಬಸವೇಶ್ವರರ ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಅವರು ಬಸವೇಶ್ವರ ಪತ್ತಿನ ಸಹಕಾರ ಸಂಘದ ನೂತನ ನಿರ್ದೇಶಕ ಸೂಗುರೇಶ ವಾರದವರ ಮನೆಯಲ್ಲಿ ಎಲ್ಲಾ ನಿರ್ದೇಶಕರಿಗೆ ಸನ್ಮಾನಿಸಿ ಮಾತನಾಡಿ,ತಾವೆಲ್ಲ ನಿರ್ದೇಶಕರು ಸೇರಿ ಸಮಾಜದಲ್ಲಿನ ಜನರ ಆರ್ಥಿಕ ಸಂಕಷ್ಟಕ್ಕೆ ನೆರವಾಗಿ ಎಲ್ಲರನ್ನು ಮೇಲೆತ್ತುವ ಕಾರ್ಯಕ್ಕೆ ಮುಂದಾಗುವಂತೆ ತಿಳಿಸಿ ಎಲ್ಲರನ್ನು ಸನ್ಮಾನಿಸಿ ಗೌರವಿಸಿದರು.

Contact Your\'s Advertisement; 9902492681

ಶ್ರೀಗಳಿಂದ ಆಶೀರ್ವಾದ ಪಡೆದ ನೂತನ ನಿರ್ದೇಶಕರಾದ ಮನೋಹರ ಎಂ.ಜಾಲಹಳ್ಳಿ,ಸೂಗುರೇಶ ವಾರದ,ಜಯಲಲಿತ ಪಾಟೀಲ,ಶ್ವೇತಾ ಎಂ ಗುಳಗಿ,ಶರಣಪ್ಪ ಕಳ್ಳಿಮನಿ ಹಾಗು ಜಗದೀಶ ಪಾಟೀಲ ಸೂಗುರು ಇವರು ಶ್ರೀಗಳಿಗೆ ಫಲ ತಾಂಬುಲ ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಷಡಕ್ಷರಿ ಹಿರೇಮಠ,ಪ್ರಕಾಶ ಅಂಗಡಿ ಹೆಮ್ಮಡಗಿ,ಮಹೇಶ ಪಾಟೀಲ,ಮಹಾಂತೇಶ ದೇಸಾಯಿ,ರಾಜೇಶ್ ಯರಮಸಾಳ,ರಾಜು ದೇವರಗೋನಾಲ,ಬಸವರಾಜ ವಾರದ,ಸತೀಶ ವಾರದ ಸೇರಿದಂತೆ ವಾರದ ಕುಟುಂಬದ ಸದಸ್ಯರುಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here