ಸುರಪುರ: ಕರ್ನಾಟಕ ಸರಕಾರ ಪ್ರತಿವರ್ಷ ನೀಡುವ ಜಾನಪದ ಅಕಾಡೆಮಿ ಪ್ರಶಸ್ತಿಗೆ ೨೦೧೯ರ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆಯಾಗಿದ್ದು,ಯಾದಗಿರಿ ಜಿಲ್ಲೆಯಿಂದ ಸುರಪುರ ತಾಲೂಕಿನ ಪೇಠ ಅಮ್ಮಾಪುರ ಗ್ರಾಮದ ಗೀಗಿ ಪದಕಾರ ಶಿವಮೂರ್ತಿ ತನೀಕೆದಾರರನ್ನು ನೇಮಕಗೊಳಿಸಿದೆ.
ಶಿವಮೂರ್ತಿ ತನೀಕೆದಾರ ಸುಮಾರು ಮೂರು ದಶಕಗಳಿಂದ ಗೀಗಿ ಪದಗಳ ಹಾಡುಗಾರಿಕೆ ಮೂಲಕ ನಾಡಿಗೆ ಪರಿಚಿತರಾಗಿರುವ ಇವರ ತಂದೆ ಹನುಮಂತಪ್ಪ ತನೀಕೆದಾರ ಕೂಡ ಗೀಗಿ ಪದ ಮತ್ತು ಮೋಹರಂ ಹಾಗು ತತ್ವ ಪದಕಾರರಾಗಿದ್ದರು.ನಾಡಿನಲ್ಲಿ ಹನುಮಂತಪ್ಪ ಕವಿ ಎಂದೆ ಪ್ರಸಿಧ್ಧರಾಗಿದ್ದರು,ಅಂತವರ ಮಗನಾದ ಶಿವಮೂರ್ತಿ ಕೂಡ ಹಲವಾರು ತತ್ವ ಪದಗಳನ್ನು ಬರೆದು ಡಪ್ಪಿನ ವದ್ಯದೊಂದಿಗೆ ಹಾಡಿ ಸೈ ಎನಿಸಿಕೊಂಡಿದ್ದಾರೆ.ಮೂರು ದಶಕಗಳ ಇವರ ಜಾನಪದ ಸೇವೆಯನ್ನು ಸರಕಾರ ಇಂದು ಗುರುತಿಸಿ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಗೊಳಿಸಿದೆ.
ಶಿವಮೂರ್ತಿಯವರ ಗೀಗಿ ಪದಗಳನ್ನು ಕೇಳುತ್ತಾ ಬಂದಿದ್ದ ಸ್ಥಳಿಯ ಶಾಸಕರಾದ ನರಸಿಂಹ ನಾಯಕ (ರಾಜುಗೌಡ) ಹಾಗು ಜಾನಪದ ಅಕಾಡೆಮಿ ಸದಸ್ಯರಾಗಿರುವ ಇದೇ ತಾಲೂಕಿನ ಜಾಲಿಬೆಂಚಿಯ ಅಮರಯ್ಯಸ್ವಾಮಿ ಇವರು ಕೂಡ ಶಿವಮೂರ್ತಿ ತನೀಕೆದಾರರ ಹೆಸರನ್ನು ಸರಕಾರಕ್ಕೆ ಶಿಫಾರಸ್ಸು ಮಾಡಿದ್ದರಿಂದ ೨೦೧೯ರ ಪ್ರಶಸ್ತಿ ಲಭಿಸಿದಂತಾಗಿದೆ.ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನಾರಿಗಿರುವ ಶಿವಮೂರ್ತಿಗೆ ತಾಲೂಕಿನ ಅನೇಕ ಜನ ಜನಪದಕಾರರು ಮತ್ತು ಗೀಗಿ ಪದಾಸಕ್ತರು ಅಭಿನಂಧನೆ ಸಲ್ಲಿಸಿದ್ದಾರೆ.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…