ಕಲಬುರಗಿ: ಬಸವ ಸಮಿತಿಯು ಮಹಿಳೆಯರಿಗಾಗಿ, ಮಹಿಳಾ ಜಾಗ್ರತಿಗಾಗಿಕ್ರಿಯಾ ಯೊಜನೆಗಳನ್ನು ರೂಪಿಸಿರುತ್ತದೆ.೧೨ ವರ್ಷಗಳಿಂದ ಪ್ರತಿ ವರ್ಷವೂ ಮಹಿಳಾ ಜಾಗೃತಿಗಾಗಿ ’ಮಹಾದೇವಿಯಕ್ಕಗಳ ಸಮ್ಮೇಳನ’ ಹಮ್ಮಿಕೊಳ್ಳುತ್ತ ಬಂದಿದೆ.ಜೊತೆಗೆ ವರ್ಷಂಪ್ರತಿಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ವಿಶೇಷ ಕಾರ್ಯಕ್ರಮಗಳನ್ನು ಹಾಕಿಕೊಂಡುಆಚರಿಸುತ್ತ ಬರುತ್ತಿದೆ.
ಇಡೀಜಗತ್ತು ಮಹಿಳೆಯರ ಸಾಧನೆಯನ್ನು ಸ್ಮರಸಿಕೊಳ್ಳಲು ವರ್ಷದಲ್ಲಿಒಂದು ದಿನವನ್ನು ಮಾತ್ರ ಮೀಸಲಾಗಿಟ್ಟರೆ ಹನ್ನೆರಡನೆಯ ಶತಮಾನದಲ್ಲಿ ಶರಣರು ದಿನವೂ ಮಹಿಳಾ ಸ್ವಾತಂತ್ರ ಸಮಾನತೆಗಾಗಿ ಚಿಂತಿಸಿದರು.ಅವರಅಭಿವ್ಯಕ್ತಿಗೆಅನುಭವ ಮಂಟಪದಂತಹ ವೇದಿಕೆಯನ್ನು ನಿರ್ಮಾಣ ಮಾಡಿಕೊಟ್ಟು ಪ್ರೋತ್ಸಾಹಿಸಿದರು.ಅವರ ವೈಚಾರಿಕತೆಗೆ ಮನ್ನಣೆ ನೀಡಿದರು.ಕಲಬುರಗಿ ಬಸವ ಸಮಿತಿಯು ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದೆ.
ಆ ಹಿನ್ನೆಲೆಯಲ್ಲಿ ದಿನಾಂಕ ೮-೩-೨೦೨೦ ರಂದುಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕನ್ನಡ ನಿವೃತ್ತ ಪ್ರಾಧ್ಯಾಪಕರಾದಡಾ. ನೀಲಮ್ಮ ಕತ್ನಳ್ಳಿ ಅವರು ಮುಖ್ಯಉಪನ್ಯಾಸಕರಾಗಿ ಆಗಮಿಸಿ, ’ಅಂತರ್ರಾಷ್ಟ್ರೀಯ ಮಹಿಳೆ ಮತ್ತು ಶಿವಶರಣೆಯರು’ ಎಂಬ ವಿಷಯಕುರಿತುಅನುಭಾವ ನೀಡಲಿದ್ದಾರೆ. ಬೆಂಗಳೂರು ಗ್ರಾಮಾಂತರ ವಿಭಾಗಜಂಟಿ ಸಾರಿಗೆಆಯುಕ್ತರಾದ ಶ್ರೀಮತಿ ಎಂ.ಪಿ.ಓಂಕಾರೇಶ್ವರಿಅವರುಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಕೊಳ್ಳಲಿದ್ದಾರೆ.ಜಯನಗರದ ನೀಲಾಂಬಿಕಾ ಬಳಗದ ಸಹೋದರಿಯರು ಭಜನೆಕಾರ್ಯಕ್ರಮ ನೆರವೇರಿಸಿಕೊಡಲಿದ್ದಾರೆ ಎಂದುಬಸವ ಸಮಿತಿಯ ಅಕ್ಕನ ಬಳಗದ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…