ನಾಡೋಜ, ಡಾ. ಪಾಟೀಲ್ ಪುಟ್ಟಪ್ಪ ಅವರ ನಿಧನಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಸಂತಾಪ

0
42

ಕಲಬುರಗಿ: ನಾಡಿನ‌ ಹಿರಿಯ ಪತ್ರಕರ್ತ, ಸಾಹಿತಿ, ಬರಹಗಾರ, ಕನ್ನಡದ ಕಟ್ಟಾಳು‌ ನಾಡೋಜ, ಡಾ. ಪಾಟೀಲ್ ಪುಟ್ಟಪ್ಪ ಅವರ ನಿಧನಕ್ಕೆ ಶಾಸಕರಾದ‌ ಪ್ರಿಯಾಂಕ್ ಖರ್ಗೆ ಅವರು ತೀವ್ರ ಸಂತಾಪ ವ್ಯಪ್ತಪಡಿಸಿದ್ದಾರೆ.

ತಮ್ಮ ದಿಟ್ಟ ನಿಲುವು ಹಾಗೂ ರಾಜ್ಯದ ಪರ ಕಾಳಜಿ ಹೊಂದಿದ್ದ ಪಾಟೀಲ್ ಪುಟ್ಟಪ್ಪನವರು ವಕೀಲರಾಗಿ ಪತ್ರಕರ್ತರಾಗಿ ರಾಜ್ಯ ಸಭೆ ಸದಸ್ಯರಾಗಿ ನಾಡಿನ ಸೇವೆಗೈದಿದ್ದಾರೆ. ಅವರ ಸೇವೆಯನ್ನು ನಾಡು ಸದಾ ಸ್ಮರಿಸುತ್ತದೆ.‌ ಒಳ್ಳೆಯವರಾಗಿದ್ದರೆ ಸಾಲದು, ಒಳ್ಳೆಯದನ್ನು ಮಾಡಬೇಕು ಎನ್ನುವ ಪಾಪು ಅವರ ಆದರ್ಶ ನಮಗೆ ಮಾದರಿ ಎಂದು ಅಗಲಿದ ಮಹಾನ್ ಚೇತನಕ್ಕೆ ಶೃದ್ದಾಂಜಲಿ ಸಲ್ಲಿಸಿದ್ದಾರೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here