ಸ್ವಾಭಿಮಾನದ ಮತದ ಅಲೆಯ ಮುಂದೆ ಕೊಚ್ಚಿ ಹೋಯ್ತಾ ಜೆಡಿಎಸ್!?

0
122

ಮಂಡ್ಯ: ಇಡೀ ದೇಶದ ಗಮನ ಸೇಳೆದಿದ್ದ, ರಾಜ್ಯದ ಮಂಡ್ಯ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಪುತ್ರ ನಿಖೀಲ್ ಕುಮಾರಸ್ವಾಮಿ ಹಾಗೂ ಚಿತ್ರ ನಟ ಮಾಜಿ ಸಂಸದ ಅಂಬರೀಶ್ ಅವರ ಪತ್ನಿ ಸುಮುಲತ ಅವರ ಮದ್ಯೆ ತೀವ್ರ ಪೈಪೋಟ್ಟಿ ಎರ್ಪಟ್ಟಿತ್ತು. ಹೀಗಾಗಿ ಎಲ್ಲರ ಚಿತ್ತ ಮಂಡ್ಯದತ್ತ ಎನ್ನುವಂತಹದಾಗಿತ್ತು.

ಎಲ್ಲಾ ಎಕ್ಸಿಟ್ ಪೋಲ್ ಸಮೀಕ್ಷೆಗಳು ಸಹ ರಾಜ್ಯದಲ್ಲಿ ಒಂದು ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆಂದು ಭವಿಷ್ಯ ನುಡಿದಿದ್ದವು. ಅಂತೆಯೇ ಅದು ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರತಿಷ್ಠೆಯ ಕಣವಾಗಿತ್ತು. ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿ ಮದ್ಯೆ ಗೆಲುವು ಯಾರಿಗೆ ಎಂದು ಎಲ್ಲರು ಕುತೂಹಲಿಗರಾಗಿದ್ದರು. ಇಂದು ಮತ ಎಣಿಕೆ ಆರಂಭವಾದಾಗಿನಿಂದಲು ಇಬ್ಬರ ಗೆಲುವಿನ ಮತಗಳ ಅಂತರ ಏರಿಳಿಕೆ ಆಗುತಿತ್ತು.

Contact Your\'s Advertisement; 9902492681

ಆದರೆ 14 ನೇ ಸುತ್ತಿನ ಮುಕ್ತಾಯಕ್ಕೆ ಪಕ್ಷೇತರ ಅಭ್ಯರ್ಥಿ ಸುಮುಲತಾ ಅವರು ನಿಖಿಲ್ ಕುಮಾರ ಸ್ವಾಮಿಗಿಂತ 85 ಸಾವಿರ ಮತಗಳ ಲೀಡ್ ನತ್ತ ಧಾಪುಗಾಲು ಇಡುವ ಮೂಲಕ ತಮ್ಮ ಗೆಲವಿನ ಮುನ್ಸೂಚನೆ ಹೊರಹಾಕಿದ್ದಾರೆ. ಹೀಗಾಗಿಯೇ ಸ್ವಾಭಿಮಾನದ ಮತದ ಅಲೆಯ ಮುಂದೆ ಕೊಚ್ಚಿಹೋಯ್ತು ಜೆಡಿಎಸ್ ಎಂದು ಕ್ಷೇತ್ರದ ಮತದಾರರು ಅಂದಾಡಿಕೊಳ್ಳುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here