ಮಾಜಿ ಸಿಎಂ ಜನ್ಮ ದಿನ ನಿಮಿತ್ತ ಕೂಲಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ

0
19

ಕಲಬುರಗಿ: ಎಸ್.ಆರ್. ಕಮಾಂಡೊಸ್ ದಿಂದ ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ಜನ್ಮದಿನಾಚರಣೆ ಪ್ರಯುಕ್ತ ಸಿದ್ದರಾಮೋತ್ಸವ ಉದನೂರ ರಸ್ತೆಯಲ್ಲಿರುವ ಡಿಡಿಯು ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ವಿವಿಧ ಹಳ್ಳಿಗಳಿಂದ ಆಗಮಿಸಿದ ಕೂಲಿ ಕಾರ್ಮಿಕರಿಗೆ ೫೦ ಆಹಾರ ಧಾನ್ಯ ಕಿಟ್‌ಗಳು ವಿತರಿಸುವ ಮೂಲಕ ಆಚರಿಸಲಾಯಿತು.

ಎಸ್.ಆರ್. ಕಮಾಂಡೊಸ್ ಸಂಸ್ಥಾಪಕ ನಿಂಗಪ್ಪ ಪೂಜಾರಿ ಮಾತನಾಡಿ, ಸಿದ್ರಾಮಯ್ಯನವರು ಇನ್ನೊಂದು ಸಲ ಮುಖ್ಯಮಂತ್ರಿಗಳನ್ನಾಗಿಸುವ ಉzಶದಿಂದ ಈ ಸಂಘಟನೆ ಹುಟ್ಟು ಹಾಕಲಾಗಿದೆ. ಅವರು ಸಿ.ಎಂ. ಆಗಿದ್ದಾಗ ಕೈಗೊಂಡ ಜನಪ್ರಿಯ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಲುಪಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ಅಹಿಂದ ಹೋರಾಟಗಾರ ಟಿ.ಶಶಿಧರ ಮಾತನಾಡಿ, ಸಿದ್ರಾಮಯ್ಯನವರ ಜನ್ಮ ದಿನ ಆಚರಿಸುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

Contact Your\'s Advertisement; 9902492681

ಡಿಡಿಯು ಶಿಕ್ಷಣ ಸಂಸ್ಥೆ ಅಧ್ಯಕ್ಷ ಭೀಮಣ್ಣ ಮೇಟಿ, ಉದ್ಯಮಿ ಮಹಾರಾಜ ಡಿಗ್ಗಿ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಧರ್ಮರಾಜ ಬಿ. ಹೇರೂರ, ಯುವ ಉದ್ಯಾಮಿ ಮಹಾರಾಜ ದಿಗ್ಗಿ, ಕೆಂಬಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ್ ಚಿಂಚೋಳಿ, ಕರ್ನಾಟಕ ಸೌಹಾರ್ಧ ವೇದಿಕೆ ಅಧ್ಯಕ್ಷ ಮಹಿಬೂಬ ಮುಲ್ಲಾ ಬಳಬಟ್ಟಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here