ಕೊರೊನಾ ನಿರ್ಮೂಲನೆಗಾಗಿ ಬೊಮ್ಮನಹಳ್ಳಿ ಗ್ರಾಮದಲ್ಲಿ ಶಪಥ ಭಜನೆ

0
41

ಸುರಪುರ: ಪ್ರತಿ ವರ್ಷದಂತೆ ಈ ವರ್ಷವು ಅಕ್ಕನಾಗಮ್ಮನವರ ಮಠದ ಜಾತ್ರೆಯನ್ನು ಆಚರಿಸಲಾಗುತ್ತಿದೆ.ಆದರೆ ಈ ವರ್ಷ ವಿಶೇಷವಾಗಿ ಶಪಥ ಭಜನೆ ನಡೆಸುವ ಮೂಲಕ ಜಗತ್ತಿನಿಂದ ಕೊರೊನಾ ನಿರ್ಮೂಲನೆಗಾಗಿ ದೇವರಲ್ಲಿ ಪ್ರಾರ್ಥಿಸಲಾಗುತ್ತಿದೆ ಎಂದು ದೇವಿಂದ್ರಯ್ಯ ಸ್ವಾಮೀಜಿ ಮಾತನಾಡಿದರು.

ಚೆನ್ನಬಸವಣ್ಣನವರ ಪೀಠ ಹಾಲಬಾವಿಯ ಶಾಖಾಮಠ ಬೊಮ್ಮನಹಳ್ಳಿಯಲ್ಲಿನ ಅಕ್ಕಮನಾಗಮ್ಮನವರ ಮಠದ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳ ನೇತೃತ್ವವಹಿಸಿ ಮಾತನಾಡಿ,ಪ್ರತಿ ವರ್ಷವು ಶ್ರಾವಣ ಮಾಸದ ಕೊನೆಯ ಸೋಮವಾರದ ನಂತರದ ಐದನೆ ದಿನದಂದು ಬೊಮ್ಮನಹಳ್ಳಿಯಲ್ಲಿ ಅಕ್ಕನಾಗಮ್ಮನವರ ಮಠದ ಜಾತ್ರೆಯನ್ನು ಆಚರಿಸಲಾಗುತ್ತದೆ.ಆದರೆ ಈ ವರ್ಷ ಜಗತ್ತಿಗೆ ಕಂಟಕವಾಗಿರುವ ಕೊರೊನಾ ವೈರಸ್ ಹಾವಳಿಯಿಂದಾಗಿ ಈ ವರ್ಷ ಸಾಂಕೇತಿಕ ಆಚರಣೆಗಳ ಮೂಲಕ ಸರಳವಾಗಿ ಜಾತ್ರೆ ಆಚರಿಸಲಾಗುತ್ತಿದೆ.ಅಲ್ಲದೆ ಈ ವರ್ಷ ವಿಶೇಷವಾಗಿ ಶಪಥ ಭಜನೆ ಮಾಡುವ ಮೂಲಕ ಕೊರೊನಾ ನಿರ್ಮೂಲನೆಗೆ ಪ್ರಾರ್ಥಿಸಲಾಗುತ್ತಿದೆ ಎಂದರು.

Contact Your\'s Advertisement; 9902492681

ಜಾತ್ರೆಯ ಅಂಗವಾಗಿ ಬೆಳಿಗ್ಗೆ ಅಕ್ಕನಾಗಮ್ಮನವರ ಗದ್ದುಗೆಗೆ ಪೂಜೆ ಸಲ್ಲಿಸಲಾಯಿತು.ನಂತರ ಪುರವಂತರ ಮೇಳದೊಂದಿಗೆ ಪಲ್ಲಕ್ಕಿ ಮೆರವಣಿಗೆ ನಡೆಯಿತು.ನಂತರ ಶಪಥ ಭಜನೆ ನಡೆಸಲಾಯಿತು.ಕಾರ್ಯಕ್ರಮದಲ್ಲಿ ಗವಿಸಿದ್ದೇಶ್ವರ ಸ್ವಾಮೀಜಿ,ಚೆನ್ನಬಸವಣ್ಣ ಸ್ವಾಮೀಜಿ,ಅಮರಯ್ಯ ಸ್ವಾಮೀಜಿ ಜಾಲಿಬೆಂಚಿ ಸೇರಿದಂತೆ ಗ್ರಾಮದ ಅನೇಕ ಮುಖಂಡರು ಮತ್ತು ಭಕ್ತಾದಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here