ಧೀರೋದ್ದಾತ ಶರಣಅಂಬಿಗರಚೌಡಯ್ಯ: ಡಾ.ಚಿತ್ಕಳಾ ಮಠಪತಿ

ಕಲಬುರಗಿ: ಶರಣ ವೃತ್ತಿ ಯಾವುದೇ ಇದ್ದರೂ ಅದನ್ನು ಮೆಚ್ಚಿಕೊಳ್ಳುವಂತಹ ಒಪ್ಪಿಕೊಳ್ಳುವಂತಹ ಅಭಿಮಾನ ಪಡುವಂತಹ ವ್ಯಕ್ತಿತ್ವವುಳ್ಳವರಾಗಿದ್ದರು. ಹುಟ್ಟು ಸಾವುಗಳೆಂಬ ಜೀವನದ ನದಿಯನ್ನು ಕೂಡಾದಾಟಿಸುವಂತಹ ದಾರ್ಶನಿಕ ವಚನಕಾರರಾಗಿದ್ದರು ಎಂದು ಕನ್ನಡ ಪ್ರಾಧ್ಯಾಪಕರಾದ ಡಾ.ಚಿತ್ಕಳಾ ಮಠಪತಿ ಹೇಳಿದರು.

ಇಲ್ಲಿನ ಬಸವ ಸಮಿತಿ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಲಿಂ. ರುದ್ರಪ್ಪ ಬೆನಕನಳ್ಳಿ ರಟಕಲ್, ಲಿಂ. ಸುಭಾಶ್ಚಂದ್ರರುದ್ರಪ್ಪ ಬೆನಕನಳ್ಳಿ ರಟಕಲ್ ಮತ್ತು ಲಿಂ. ರೇವಣಪ್ಪ ಸಂಗಪ್ಪ ಮೀಸೆ, ಲಿಂ.ಡಾ. ಅನಿಲ ರೇವಣಪ್ಪ ಮೀಸೆ ಸ್ಮರಣಾರ್ಥ ಆನ್‌ಲೈನ್‌ ಅರಿವಿನ ಮನೆ ೬೩೬ ನೆಯದತ್ತಿ ಕಾರ್ಯಕ್ರಮದಲ್ಲಿ ’ನಿಜ ಶರಣ ಅಂಬಿಗರಚೌಡಯ್ಯ’ಎಂಬ ವಿಷಯದ ಕುರಿತು ಮಾತನಾಡಿದರು.

ವೃತ್ತಿಯನ್ನು ಶರಣರುಉದರಪೋಷಣೆಂದು ಕೈ ಕೊಂಡಿದ್ದರೂಕೂಡಾಅದರ ನೆಲೆಯಲ್ಲಿದ್ದುಕೊಂಡು ಮಹಾನುಭಾವಿಗಳಾದದ್ದು ವಿಶೇಷವೆನ್ನಬಹುದು. ಅಂಬಿಗರಚೌಡಯ್ಯನವರುತಮ್ಮ ವೃತ್ತಿಯ ವೈಶಿಷ್ಟ್ಯಗಳನ್ನು ತಮ್ಮ ವಚನಗಳಲ್ಲಿ ಅದು ಬದುಕಿಗೂ ಹಾಗೂ ವೃತ್ತಿಗೂಅನ್ವಯವಾಗುವಂತೆ ಬರೆದಿದ್ದಾರೆ.ಚಂದಗೆಟ್ಟವರೆಲ್ಲಾ ಬಂದುಏರಿ ನನ್ನದೋಣಿ ಶಿವನ ನೆಲೆ ಕಾಣಿಸುವೆಎಂದು ಹೇಳುತ್ತಾ ಬದುಕಿನಬವಣೆಗಳ ಮಧ್ಯೆ ಸಿಲುಕಿಕೊಂಡವರನ್ನೂ ಆನುಭಾವಿಕ ನೆಲೆಗೆ ಕೊಂಡೊಯ್ಯವ ಮಾತುಗಳನ್ನಾಡಿದ್ದಾರೆ. ದೋಣಿಯನ್ನೇರಿದವರು ತನಗೆ ಕೊಡಬೇಕಾದ ಉದರ ಪೋಷಣೆಯದುಡ್ಡಿಗೂ ಸಹ ಹಿಡಿದ ಬಿಡುವ ಮನವನ್ನು ನನಗೆ ಕೊಡಿರೆಂದು ಹೇಳುತ್ತಾರೆ. ಮನದಚಾಂಚಲ್ಯವನ್ನು ಕಳೆದು ಜೀವನದ ಸಾರ್ಥಕತೆಯನ್ನುಕಾಣುವತ್ತ ಪಯಣಿಗರನ್ನುಒಯ್ಯುವ ಮಹದಾಸೆಯನ್ನುತಮ್ಮ ವಚನಗಳಲ್ಲಿ ವ್ಯಕ್ತಿಪಡಿಸುತ್ತಾರೆ.

ಅಂಬಿಗರಚೌಡಯ್ಯನವರ ವಚನಗಳಲ್ಲಿ ರೊಟ್ಟಿ,ಹೊಟ್ಟಿಉದರನ್ನಮುಟಿಗಿ, ಸೀತನಿ ಮುಂತಾದ ಪದಗಳು ಬರುವುದನ್ನು ನೋಡಿದರೆಅವರುಉತ್ತರಕರ್ನಾಟಕ ಭಾಗದವರೆಂಬುದುಖಚಿತವಾಗುತ್ತದೆ. ಈ ಬಗ್ಗೆ ಅನೇಕ ಸಂಶೋಧಕರೂ ಸಹಮತ ವ್ಯಕ್ತ ಪಡಿಸುತ್ತಾರೆ.ಕಲ್ಯಾಣದತ್ರಿಪುರಾಂತಕಕೆರೆಯಲ್ಲಿತನ್ನಕಾಯಕವನ್ನುಕೈಗೊಂಡಿದ್ದರ ಬಗ್ಗೆ ಉಲ್ಲೇಖಗಳು ಸಿಗುತ್ತವೆ. ಕನ್ನಡಅಭಿವೃದ್ಧಿ ಪ್ರಾಧಿಕಾರದವರು ಪ್ರಕಟಿಸಿದ ವಚನ ಸಂಕಲನದಲ್ಲಿಚೌಡಯ್ಯನವರ ೨೭೯ ವಚನಗಳನ್ನು ಕಾಣಬಹುದು ಬೇರೆ ಬೇರೆಕಡೆ ಪ್ರಕಟಗೋಂಡ ೩೦೦ ವಚನಗಳನ್ನು ನಾವು ಗುರುತಿಸಬಹುದು.

ತಮ್ಮ ಹೆಸರನ್ನೇ ವಚನಾಂಕಿತವನ್ನಾಗಿಸಿಕೊಂಡ ಏಕೈಕ ಧೀರೋದ್ದಾತ ವ್ಯಕ್ತಿತ್ವದ ಶರಣ ನೆಂದರೆ ಅದು ಅಂಬಿಗರಚೌಡಯ್ಯ ಮಾತ್ರ.ಅವರ ವಚನಗಳಲ್ಲಿ ನಿಷ್ಠುರ, ನಿರ್ಭಿಡೆಯ ನುಡಿಗಳನ್ನು ನಾವು ಸಾಕಷ್ಟು ಸಂಖ್ಯೆಯಲ್ಲಿಕಾಣಬಹುದಾಗಿದೆ.ಕಟ್ಟಿದ ಲಿಂಗವ ಬಿಟ್ಟು.ಬೆಟ್ಟದಲಿಂಗಕ್ಕೆ ಹೋಗಿ, ಹೊಟ್ಟೆಯಡಿಯಾಗಿ ಬೀಳುವ ಲೊಟ್ಟಿ ಮೂಳರ ಕಂಡರೆ ಮೆಟ್ಟಿದಎಡಪಾದರಕ್ಷೆಯಕೊಂಡು ಲೊಟ ಲೊಟನೆ ಹೊಡೆಯೆಂದಾತ ನಮ್ಮಅಂಬಿಗರಚೌಡಯ್ಯಎಂದು ಹೇಳುತ್ತಾ ಮೌಢ್ಯತೆಯ ವಿರುದ್ಧ ಮುಲಾಜಿಲ್ಲದೆಗುಡುಗಿದ್ದನ್ನು ನಾವು ಕಾಣಬಹುದಾಗಿದೆ.

ಕಾರ್ಯಕ್ರಮದಲ್ಲಿ ಕಲಬುರಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸವತಿ ಖೂಬಾ, ಉಪಾಧ್ಯಕ್ಷರಾದ ಡಾ.ಜಯಶ್ರೀದಂಡೆ, ಡಾ. ಬಿ.ಡಿಜತ್ತಿ ವಚನ ಅಧ್ಯಯ ಮತ್ತು ಸಂಶೋಧನಕೇಂದ್ರದ ನಿರ್ದೇಶಕರಾದಡಾ. ವೀರಣ್ಣದಂಡೆ ಹಾಗೂ ದತ್ತಿ ದಾಸೋಹಿಗಳಾದ ಶ್ರೀ ಶೀಲಾ ಕೋಣಿನ ಮತ್ತು ಡಾ.ಶಶಿಕಾಂತ ಆರ್.ಮೀಸೆಉಪಸ್ಥಿತರಿದ್ದರು.ಶ್ರೀ ಹೆಚ್.ಕೆ.ಉದ್ದಂಡಯ್ಯಕಾರ್ಯಕ್ರಮ ನಿರೂಪಿಸಿದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

4 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

6 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

7 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

7 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

7 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

7 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420